ಕಾರವಾರ: ಯಾವುದೇ ಅನಾಥ ಪರಿತ್ಯಜಿಸಲ್ಪಟ್ಟ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿರವರು ದತ್ತು ಮುಕ್ತ ಎಂದು ಘೋಷಿಸಿ ಆದೇಶ ನೀಡಿದ ನಂತರ ಆ ಮಕ್ಕಳು ದತ್ತಕ್ಕೆ ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದತ್ತು ಪಡೆಯಲು ಇಚ್ಛಿಸುವವರು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕು ಮತ್ತು ಆರ್ಥಿಕವಾಗಿ ಮಗುವನ್ನು ಸಾಕುವ ಸಾಮಥ್ರ್ಯ ಹೊಂದಿರವರು ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ.
ಮಗು ಮಾರಾಟ ಮಾರಾಟಮಾಡುವುದು ಹಾಗೂ ಕಾನೂನು ಬಾಹಿರ ದತ್ತು ಪಡೆಯುವುದು ಅಪರಾಧವಾಗಿರುತ್ತದೆ. ಮಕ್ಕಳನ್ನು ಮಾರುವವರೆಗೂ ಹಾಗೂ ಕೊಳ್ಳುವವರೆಗೂ ಬಾಲಬ್ಯಾಯ ಕಾಯಿದೆ 2015 ಸೆಕ್ಷನ್ 81ರ ಅನ್ವಯ 5 ವರ್ಷಗಳ ಸೆರೆಮನೆ ವಾಸದೊಂದಿಗೆ ರೂ.1. ಲಕ್ಷದವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿಯು 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವೆರೆಗೆ ವಿಸ್ತರಣೆ ಇರುತ್ತದೆ. ಇಂತಹ ಅಪರಾಧ ಕಂಡುಬಂದಲ್ಲಿ ಸಾರ್ವಜನಿಕರು ಮುಕ್ತವಾಗಿ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಬಹುದು.
ಸಹಾಯ ಟ್ರಸ್ಟ್, ದತ್ತು ಮಕ್ಕಳ ಕೇಂದ್ರ, ನಂ.441, ಮರಾಠಿಕೊಪ್ಪ, ಶಿರಸಿ(ಉ.ಕ) ಜಿಲ್ಲೆಯಲ್ಲಿರುವ ಅಧಿಕೃತ ದತ್ತು ಕೇಂದ್ರವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರವಾರ. ದೂ:08382-220182 ಸಂಪರ್ಕಿಸಬಹುದಾಗಿರುತ್ತದೆ.