ಭಟ್ಕಳ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ ಹಾಗೂ ಸಂಗಮ ಸೇವಾ ಸಂಸ್ಥೆ (ರಿ) ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ವೆಸ್ಟ್ಕೋಸ್ಟ್ ಪೇಪರ ಮಿಲ್ ದಾಂಡೇಲಿಯವರ ಪ್ರಾಯೋಜತ್ವದಲ್ಲಿ 'ವಾಯು ಮಾಲಿನ್ಯವನ್ನು ಹಿಮ್ಮೆಟ್ಟಿಸಿ' ಎಂಬ ವಿಷಯದಲ್ಲಿ ತಾಲೂಕಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಚಿತ್ರ ಬಿಡಿಸುವ ಸ್ಪರ್ಧೆ ಭಟ್ಕಳದ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ನಡೆಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಾಧ್ಯಾಪಕ ಗಣಪತಿ ಶಿರೂರ ವಹಿಸಿದ್ದರು. ಅತಿಥಿಗಳಾಗಿ ಪಾಲಿಟೆಕ್ನಿಕಲ್ ಕಾಲೇಜಿನ ಉಪಪ್ರಾಂಶುಪಾಲ ಮರಿ ಸ್ವಾಮಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ನಿರ್ಣಾಯಕರಾಗಿ ಶಾಂತಕುಮಾರ ಬಿರಾದಾರ, ಕೃಷ್ಣ ಬಿ. ಹೆಗಡೆ ಉಪಸ್ಥಿತರಿದ್ದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಯಾ ಗೌಡ ವಂದಿಸಿದರು.
ಫಲಿತಾಂಶ : ಪ್ರಥಮ - ಶಶಾಂಕ ಗಣೇಶ ಹೆಬ್ಬಾರ, ದ್ವಿತೀಯ - ಕೃತೀಕಾ ಸಿ. ಪ್ರಭು, ತೃತೀಯ - ಸಂದೀಪ ಎಸ್. ಗೊಂಡ, 4ನೇ ಸ್ಥಾನ - ಆಕಾಶ ವಿ. ಭಂಡಾರಿ, 5ನೇ ಸ್ಥಾನ - ಹಿಬ್ರೊ ಅಶ್ವಗಂಧ, ಕಾರ್ಯಕ್ರಮದಲ್ಲಿ ಗಣೇಶ ರೇವಣಕರ್ ಬಹುಮಾನ ವಿತರಿಸಿದರು.