ಬೆಂಗಳೂರು: ಕೆಪಿಸಿಸಿ ಶಿಫಾರಸ್ಸಿನ ಮೇರೆಗೆ ಅನರ್ಹಗೊಂಡ 14 ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿ ಎಐಸಿಸಿ ಆದೇಶಿಸಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್, ಶ್ರೀಮಂತ ಪಾಟೀಲ್, ಬಿ.ಸಿ.ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಭೈರತಿ ಬಸವರಾಜು, ಆನಂದ್ ಸಿಂಗ್, ರೋಷನ್ ಬೇಗ್, ಕೆ.ಸುಧಾಕರ್, ಆರ್.ಶಂಕರ್, ಎಂಟಿಬಿ ನಾಗರಾಜ್,ಆನಂದ್ ಸಿಂಗ್, ಮುನಿರತ್ನ ಅವರನ್ನು ಎಐಸಿಸಿ ಪಕ್ಷದಿಂದ ಉಚ್ಚಾಟಿಸಿ ಆದೇಶಿಸಿದೆ.