ಶಿರಸಿ : ಇತ್ತಿಚಿನ ದಿನಗಳಲ್ಲಿ ದೇವಸ್ಥಾನ ಕಳ್ಳತನ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಶಿರಸಿಯ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ದೇವಸ್ಥಾನ ಸಮಿತಿಯ ಅಧ್ಯಕ್ಷ - ಸದಸ್ಯರ ಸಭೆಯನ್ನು ನಡೆಸಲಾಯಿತು .
ಪೊಲೀಸ್ ಇಲಾಖೆ ವತಿಯಿಂದ ನಡೆದ ಈ ಸಭೆಯಲ್ಲಿ ಮುಂಜಾಗೃತೆಯ ಬಗ್ಗೆ ತಿಳಿಸಲಾಯಿತು. ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನಗಳಿಗೆ ಸಿಸಿಟಿವಿಗಳನ್ನು ಅಳವಡಿಸುವುದು, ಕಾವಲುಗಾರರನ್ನು ನೇಮಿಸಿಕೊಳ್ಳುವುದು,
ಭದ್ರವಾದ ಲಾಕರ್ ಗಳನ್ನು ಅಳವಡಿಸುವುದು, ಕಳ್ಳತನ ಸೂಚನೆ ನೀಡುವ ಅಲಾರಾಂ ಅಳವಡಿಸುವುದು, ದೇವಸ್ಥಾನದಲ್ಲಿರುವ ಬಂಗಾರದ ಆಭರಣಗಳು ಮತ್ತು ಕಾಣಿಕೆ ಹುಂಡಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಯಿತು.
ಶಿರಸಿ ಉಪವಿಭಾಗದ ಡಿಎಸ್ಪಿ ಗೋಪಾಲಕೃಷ್ಣ ನಾಯಕ ಹಾಗೂ ಶಿರಸಿ ವೃತ್ತ ನಿರೀಕ್ಷಕರಾದ ಬಿ ಯು ಪ್ರದೀಪ ರವರ ಮಾರ್ಗದರ್ಶನದಲ್ಲಿ ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ ಅಪರಾಧ ವಿಭಾಗದ ಪಿಎಸ್ಐ ಜಯಶ್ರೀ ಶಾನಭಾಗ, ಪ್ರೋಬೆಷನರಿ ಪಿಎಸ್ಐ ನಾಗೇಂದ್ರ , ಗ್ರಾಮೀಣ ಮತ್ತು ನಗರ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು