ಪುತ್ತೂರು : ಇನ್ನೊಮ್ಮೆ ಬಸವನಗೌಡ ಯತ್ನಾಳ್ ಬೇಕಾಬಿಟ್ಟಿಯಾಗಿ ಮಾತನಾಡಿದರೆ ಕೇಂದ್ರ ಹೈಕಮಾಂಡ್ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪುತ್ತೂರಿನಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದ್ದಾರೆ.
ಶಾಸಕ ಬಸನಗೌಡ ಯತ್ನಾಳ್ ಸಿಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರೀಯಿಸಿದ ಅವರು, ನಾನು ವೈಯಕ್ತಿಕವಾಗಿ ಯತ್ನಾಳ್ ಬಗ್ಗೆ ಏನು ಹೇಳಲ್ಲ. ಆಗಾಗ ನಾನು ಯತ್ನಾಳ್ ಅವರ ನಡವಳಿಕೆ ಬಗ್ಗೆ ಮಾತನಾಡುತ್ತೇನೆ.
ನಾನು ಅಧ್ಯಕ್ಷನಾಗಿದ್ದಾಗ ಅವರು ಹೀಗೆ ನಾಲಿಗೆನ ಹರಿಯಬಿಟ್ಟಿದ್ದರಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದೆ. ಮತ್ತೆ ಅವರೇ ಒಂದು ಯಡಿಯೂರಪ್ಪರನ್ನು ಮಾತನಾಡಿಸಿ ಪಕ್ಷ ಸೇರಿದ್ದರು ಎಂದು ಹೇಳಿದರು.
ಮಂತ್ರಿ ಸ್ಥಾನಕ್ಕಾಗಿ ಯತ್ನಾಳ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರನ್ನ ಕರೆದು ಮಾತನಾಡಿಸಿ ಮಂತ್ರಿಸ್ಥಾನ ನೀಡಬೇಕೆಂಬುದು ಯತ್ನಾಳ್ ರ ಪ್ಲಾನ್ ಆಗಿದೆ. ಯತ್ನಾಳ್ ಅವರನ್ನು ಸಮಾಧಾನಪಡಿಸುವ ಪ್ರಶ್ನೆಯೇ ಇಲ್ಲ. ಯತ್ನಾಳ್ ಅವರೇ ನಿಮ್ಮ ಸಲಹೆ-ಸೂಚನೆ ನಮಗೆ ಈಗ ಅಗತ್ಯವಿಲ್ಲ. ವಾಜಪೇಯಿ ಸರ್ಕಾರದಲ್ಲಿ
ರಾಜ್ಯ ಸಚಿವರಾಗಿದ್ದವರು ಹೇಗೆ ನಡೆದುಕೊಳ್ಳಬೇಕು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಸದಾನಂದ ಗೌಡ,
ಯತ್ನಾಳ್ ಅವರ ತಲೆ ಪೂರ್ತಿಯಾಗಿ ಸರಿ ಇಲ್ಲ ಅಂತ ಅನಿಸುತ್ತದೆ. ಪ್ರಾಮಾಣಿಕವಾಗಿ ಶಾಸಕರಾಗಿ ಕೆಲಸ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಶಾಸಕ ಯತ್ನಾಳ್ ಗೆ ಕೇಂದ್ರ ಸಚಿವ ಸದಾನಂದಗೌಡ ಎಚ್ಚರಿಕೆ ನೀಡಿದ್ದಾರೆ.