ಅ.3ರಂದು ಭಟ್ಕಳದಲ್ಲಿ  ಭ್ರಷ್ಟಚಾರ ನಿಗ್ರಹದಳದಿಂದ ಅಹವಾಲು ಸ್ವೀಕಾರ                        

Source: sonews | By Staff Correspondent | Published on 29th July 2020, 4:20 PM | Coastal News |

ಕಾರವಾರ: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಪೊಲೀಸ್ ಠಾಣೆಯ ಅಧಿಕಾರಿಗಳು ಅಗಸ್ಟ್ 3ರಿಂದ 7ರವರೆಗೆ ವಿವಿಧ ಸ್ಥಳಗಳಲ್ಲಿ ಅಹವಾಲು ಸ್ವೀಕಾರ ಹಾಗೂ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ.

ಅಗಸ್ಟ್ 3ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಭಟ್ಕಳ, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಹೊನ್ನಾವರ, 4ರಂದು ಬೆಳಗ್ಗೆ 11ರಿಂದ 1ರವರೆಗೆ ಕುಮಟಾ, 3ರಿಂದ 5ರವರೆಗೆ ಅಂಕೋಲಾ, 5ರಂದು ಬೆಳಗ್ಗೆ 11ರಿಂದ 1ರವರೆಗೆ ಸಿದ್ದಾಪುರ, 3 ರಿಂದ 5ರವರೆಗೆ ಶಿರಸಿ, 6ರಂದು ಬೆಳಗ್ಗೆ 11ರಿಂದ 1ರವರೆಗೆ ಮುಂಡಗೋಡ, 3 ರಿಂದ 5ರವರೆಗೆ ಯಲ್ಲಾಪುರ, 7ರಂದು ಬೆಳಗ್ಗೆ 11 ರಿಂದ 1ರವರೆಗೆ ಹಳಿಯಾಳ ಹಾಗೂ 3 ರಿಂದ 5ರವರೆಗೆ ಜೋಯಿಡಾ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕಾರಿಸಲಿದ್ದಾರೆ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...