ಮುಂಡಗೋಡ: ಎಸಿಬಿ ಡಿಎಸ್‍ಪಿ ಶ್ರೀಕಾಂತ ಮುಂಡಗೋಡ ಗೆ ಭೇಟಿ

Source: S.O. News Service | By I.G. Bhatkali | Published on 26th November 2020, 6:23 PM | Coastal News | Don't Miss |

ಮುಂಡಗೋಡ:  ಗುರುವಾರ ದೊಂದು ಎಸಿಬಿ ಡಿಎಸ್ಪಿ ಶ್ರೀಕಾಂತ  ಮುಂಡಗೋಡ ಪರಿವೀಕ್ಷಣಾ ಮಂದಿರಕ್ಕೆ  ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.

ದಲಿತ ವಿಮೋಚನಾ ಸೇನೆಯ ಬೆಳಗಾವಿ ವಿಭಾಗದ ಅಧ್ಯಕ್ಷ ಶರೀಫ ಮುಗಳಗಟ್ಟಿ ಮುಂಡಗೋಡ ತಾಲೂಕಿಗೆ ಸಂಬಂದ ಪಟ್ಟ  ಸುಳ್ಳೊಳ್ಳಿ ದಿಂದ ಬಿಳ್ಕಿಯವರೆಗಿನ ರಸ್ತೆ ಕಾಮಗಾರಿ ಮಾಡದೇ ಬಿಲ್ ತೆಗೆದಿದ್ದಾರೆ ಈ ಕುರಿತು ಸಂಭಂದ ಪಟ್ಟ      ಮುಂಡಗೋಡ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಅಭಿಯಂತರರು ಹಾಗೂ ಗುತ್ತಿಗೆ ದಾರರ ಮೇಲೆ ಕ್ರಮ ಜರುಗಿಸಬೇಕೆಂದು ದೂರು ನೀಡಿದರು
ಈ ಸಂದರ್ಭದಲ್ಲಿ ಎಸಿಬಿ ಇನ್ಸಪೇಕ್ಟರ ಅಲಿ ಶೇಖ, ದಲಿತ ಮುಖಂಡ ಹನ್ಮಂತ ಭಜಂತ್ರಿ, ಗಣೇಶ ಶೇಟ್. ಮಹ್ಮದ ನದಾಫ ಸೇರಿದಂತೆ ಮುಂತಾದವರು ಇದ್ದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೃಷಿಕೂಲಿಕಾರರ ಸಂಘದ ಒತ್ತಾಯ
ಮುಂಡಗೋಡ, ನ.26: ತಾಲೂಕ ಕೃಷಿಕೂಲಿಕಾರರ ಸಂಘವು ನವಂಬರ 26 ಗುರುವಾರ ಗ್ರಾಮೀಣ ಕರ್ನಾಟಕವನ್ನು ಬಂದ ಗೆ ಪ್ರತಿಭಟನೆ ಹಮ್ಮಿಕೊಂಡು ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರ ರೈತರವಿರುದ್ದ ಮಾಡಿರುವ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನ ಮಂತ್ರಿಗಳಿಗೆ ಹಾಗು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮುಖಾಂತರ ಮನವಿ ಅರ್ಪಿಸಿದರು.

ಮನವಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ ಕಾಯ್ದೆ  2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ-2020, ವಿದ್ಯುತ್ ಕಾಯ್ದೆ ತಿದ್ದುಪಡಿ-2020, ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞ, ಎಪಿಎಂಸಿ ಕಾಯ್ದೆ(ತಿದ್ದುಪಡಿ) ಸುಗ್ರೀವಾಜ್ಞಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹಾಗೂ ಡಾ. ಎಂ.ಎಸ್.ಸ್ವಾಮಿನಾಥನ ವರದಿಯನ್ವಯ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದ ನೀಡಿ ಎಲ್ಲಾ ರೈತರ ಕೃಷಿಕೂಳಿಕಾರರ ಸಾಲಮನ್ನಾ ಸಾಲನೀಡಿಕೆಗೆ ಸಂಭಂದಿಸಿದ ಋಣಮುಕ್ತ ಕಾಯ್ದೆಗಳನ್ನು ಕೇಂದ್ರಸರಕಾರ ಜಾರಿ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘದ ತಾಲೂಕ ಅಧ್ಯಕ್ಷ ಭೀಮಣ್ಣ ಭೂವಿ, ಹನ್ಮಂತಪ್ಪ ನ್ಯಾಸರ್ಗಿ, ರವಿ ಲಕ್ಕೋಳ್ಳಿ, ಭೂತೇಶ ಚಿತ್ರಗಾರ, ಬಸವರಾಜ ಧಾರವಾಡ, ವಾಣಿ ತೇವರ, ದಸ್ತಗೀರ ಮಳಗಿ, ಕೊಟೇಶ ಕೊಳಗಿ ಸೇರಿದಂತೆ ಮುಂತಾದವರು ಇದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...