ಅಬುಧಾಬಿ : ಮಂಗಳೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಲ್ಪಡುವ “ಮಂಗಳೂರು ಕಪ್ 2017”ಕಪ್ ಐದನೇ ಸೀಸನ್ ಕುರಿತಾದ ಪತ್ರಿಕಾ ಗೋಷ್ಠಿ ಇತ್ತೀಚಿಗೆ ಶೇಖ್ ಝಾಯಿದ್ಅಂತಾರಾಷ್ಟ್ರೀಯ ಕ್ರೀಡಾಂಗಣದ ಪ್ರೆಸ್ ಕಾನ್ಫರೆನ್ಸ್ ಕೊಠಡಿಯಲ್ಲಿ ನಡೆಯಿತು.
ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಲತೀಫ್ ಕೆ . ಹೆಚ್ ಕಕ್ಕಿಂಜೆ ಎಂಸಿಸಿ ಯ ಧ್ಯೇಯೋದ್ದೇಶ ಮತ್ತು ಪಂದ್ಯಾವಳಿಯ ನಿಯಮಾವಳಿಯನ್ನು ಕೂಲಂಕುಷವಾಗಿ ವಿವರಿಸಿದರು.