ಕಾರವಾರ : ಕೊರೋನಾ ಸೋಂಕಿತ ಗಂಧದ ಕಳ್ಳನೋರ್ವ ಕೋವಿಡ್ ವಾರ್ಡ ನಿಂದ ಪರಾರಿಯಾದ ಘಟನೆ ಕಾರವಾರದಲ್ಲಿ ನಡೆದಿದೆ.
ಶಿಕಾರಿಪುರ ಮೂಲದ ಸೈಯದ್ ಇಸ್ರಾಲ್ ಕರೀಮಖಾನ್ ಪರಾರಿಯಾದವ ಸೋಂಕಿತ
ಮೂರು ದಿನಗಳ ಹಿಂದೆ ಮುಂಡಗೋಡ ತಾಲೂಕಿನ ಪಾಳಾದಲ್ಲಿ ಗಂಧ ಕಳ್ಳತನ ಹಿನ್ನಲೆಯಲ್ಲಿ ಬಂಧಿಸಲಾಗಿತ್ತು. ಬಂಧನದ ನಂತರ ಕೊರೋನಾ ದೃಡಪಟ್ಟ ಹಿನ್ನಲೆಯಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡ್ ಗೆ ದಾಖಲಿಸಲಾಗಿತ್ತು.
ಭಾನುವಾರ ಮುಂಜಾನೆ ಕೋವಿಡ್ ವಾರ್ಡಿನಿಂದ ಪರಾರಿಯಾಗಿದ್ದಾನೆ. ಕಾರವಾರ ಪೊಲೀಸರು ಪರಾರಿಯಾದ ಸೋಂಕಿತ ಕಳ್ಳನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.