ಕಾರವಾರ : ಕರಾವಳಿಯಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಕಾರವಾರ ಸಮೀಪ ಸಮುದ್ರದಲ್ಲಿ ನಿಲ್ಲಿಸಿದ್ದ ಯಾಂತ್ರಿಕ ದೋಣಿಗಳೆರಡು ದಡಕ್ಕೆ ಬಂದು ಬಿದ್ದಿವೆ. ರಾತ್ರಿ ಸಮಯದಲ್ಲಿ ಮಳೆಯೊಂದಿಗೆ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಬೋಟುಗಳ ಲಂಗರು ತುಂಡಾಗಿದ್ದರಿಂದ ಈ ಅವಘಢ ಸಂಭವಿಸಿದೆ.
ಎರಡು ಬೋಟುಗಳು ಮಂಗಳೂರು ಕಡೆಯದ್ದಾಗಿದೆ. ಹವಮಾನ ವೈಪರೀತ್ಯದಿಂದಾಗಿ ನೂರಾರು ಯಾಂತ್ರಿಕ ದೋಣಿಗಳು ಕಾರವಾರ ಬಂದರಿನಲ್ಲಿ ಬಂದು ಲಂಗರು ಹಾಕಿ ನಿಂತಿವೆ. ಬೋಟುಗಳನ್ನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ಉದಯ ಬಾನಾವಳಿಕರ ಎಂಬುವವರಿಗೆ ಸೇರಿದ ನಾಡ ದೋಣಿ ಕೂಡ ಕಡಲ ಅಲೆಗೆ ಚೂರಾಗಿದ್ದು ಬೋಟ್ ಮಾಲೀಕರು ತೊಂದರೆ ಅನುಭವಿಸಿದ್ದಾರೆ.