ಗೋವಾದಲ್ಲಿ ನಾಪತ್ತೆಯಾದ ವ್ಯಕ್ತಿ ಭಟ್ಕಳದಲ್ಲಿ ಪತ್ತೆ, ಸಂಬಂಧಿಕರಿಗೆ ಒಪ್ಪಿಸಿದ ಪೊಲೀಸರು.

Source: SO News | By Laxmi Tanaya | Published on 12th October 2020, 7:21 PM | Coastal News | Don't Miss |

ಭಟ್ಕಳ: ಗೋವಾದ ಕಾಣಕೋಣದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊರ್ವರು ಭಟ್ಕಳ ಪಟ್ಟಣದಲ್ಲಿ ಪತ್ತೆಯಾಗಿದ್ದಾರೆ.

ಗೋವಾದ ಕಾಣಕೋಣ ನಿವಾಸಿ ವಿಜಯ ರಾಮಚಂದ್ರ ಮಲಿಯಾರ ಗೋವಾದಲ್ಲಿ ಕಳೆದ ಸೆ.19ರಂದು ನಾಪತ್ತೆಯಾಗಿದ್ದರು. ಇವರು ಕೊಂಕಣ ರೈಲ್ವೆ ಸಿಬ್ಬಂದಿ ಎನ್ನಲಾಗಿದೆ. ಈ ಕುರಿತು ಅವರ ಪತ್ನಿ ವಿನಯಾ ಎಂ. ಗೋವಾದ ಕಾಣಕೋಣ ಪೊಲೀಸರಿಗೆ ದೂರು ನೀಡಿದ್ದರು.

 ಗೋವಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಭಟ್ಕಳದಲ್ಲಿ ಮಾನಸಿಕ ಅಸ್ವಸ್ಥಗೊಂಡು ತಿರುಗಾಡುತ್ತಿದ್ದರು. ಪಟ್ಟಣದ ಟಿಎಫ್‍ಸಿ ಹೊಟೇಲ್ ಬಳಿ ಅಸ್ವಸ್ಥಗೊಂಡ ಬಿದ್ದಿದ್ದರು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಗೋವಾದ ನಾಪತ್ತೆ ಪ್ರಕರಣ ಹಿಂಬಾಲಿಸಿದ ಭಟ್ಕಳ ಪೊಲೀಸರು ಸಂಬಂಧಿಕರ ಪತ್ತೆ ಹಚ್ಚಿದ್ದಾರೆ.  ಬಳಿಕ ಅವರ ಸಂಬಂಧಿಕರಿಗೆ ಕರೆಯಿಸಿ ಅವರಿಗೆ ಒಪ್ಪಿಸಿದ್ದಾರೆ.

ಎಎಸ್‍ಐಗಳಾದ ರಾಮಚಂದ್ರ ವೈದ್ಯ, ರವಿ ನಾಯ್ಕ,  ಹವಾಲ್ದಾರ  ನಾರಾಯಣ ನಾಯ್ಕ ಇತರರು ಇದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...