ಭಟ್ಕಳ: ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಸಾವು
ಭಟ್ಕಳ: ಬಹಿರ್ದೆಸೆಗೆಂದು ಸಮುದ್ರದ ಕಡೆ ಹೋಗಿದ್ದ ವ್ಯಕ್ತಿ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಗ್ರಾಮೀಣ ಪೊಲೀಸ್ ವ್ಯಾಪ್ತಿಯ ಕರಿಕಲ್ ಗ್ರಾಮದಲ್ಲಿ ಜರಗಿದೆ.
ಮೃತ ವ್ಯಕ್ತಿಯನ್ನು ಕೂಲಿ ಕಾರ್ಮಿಕ ಮಂಜುನಾಥ್ ದುರ್ಗಪ್ಪ ನಾಯ್ಕ(೪೨) ಎಂದು ಗುರತಿಸಲಾಗಿದೆ.
ಎಂದಿನಂತೆ ಬಹಿರ್ದೆಸೆಗೆಂದು ಮನೆಯ ಪಕ್ಕದ ಸಮುದ್ರ ತೀರಕ್ಕೆ ತೆರಳಿದ್ದ ಈತ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ. ಮೃತ ವ್ಯಕ್ತಿಗೆ ಸರಿಯಾಗಿ ಈಜಲು ಬಾರದೆ ಇರುವುದರಿಂದ ಮೃತಪಟ್ಟಿರುವುದಾಗಿ ಹಿನ್ನೆಲೆ ತಿಳಿದು ಬಂದಿದೆ.
ಈ ವೇಳೆ ಸ್ಥಳೀಯರು ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದು ಕೆಲ ಸಮಯದ ನಂತರ ಮ್ರತನ ದೇಹವೂ ಸಮುದ್ರದ ದಡಕ್ಕೆ ಬಂದಿದ್ದು ತಕ್ಷಣಕ್ಕೆ ಮೃತ ದೇಹವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಮೃತನ ಸಹೋದರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.