ಮುಂಡಗೋಡ: ಏಳು ಪೊಲೀಸ ಸಿಬ್ಬಂದಿಗಳು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಪೊಲೀಸ ಠಾಣೆಯಯಲ್ಲಿ ವರ್ಗಾವಣೆಗೊಂಡ ಸಿಬ್ಬಂದಿಗಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ವರ್ಗಾವಣೆಗೊಂಡ ಎಎಸ್ಐ ಅಶೋಕ ರಾಠೋಡ, ಖೀರು ಘಟಕಾಂಬ್ಳೆ, ರಾಘವೇಂದ್ರ ನಾಯಕ್, ಕುಮಾರ ಬಣಕಾರ, ಗುರು ನಾಯಕ್, ಭಗವಾನ ಗಾಂವಕರ್ ಹಾಗೂ ಮಹಿಳಾ ಸಿಬ್ಬಂದಿ ಪೂಜಾ ಸಿಬ್ಬಂದಿಗಳಿಗೆ ಪೊಲೀಸ ಠಾಣೆಯ ವತಿಯಿಂದ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು. ವರ್ಗಾವಣೆಗೊಂಡ ಪೊಲೀಸರು ತಾಲೂಕಿನಲ್ಲಿ ಜನಮನ್ನಣೆಗಳಿಸಿದ್ದರು
ಸಮಾರಂಭದಲ್ಲಿ ಪಿಐ ಪ್ರಭುಗೌಡ ಡಿ.ಕೆ, ಪಿಎಸ್ಐ ಬಸವರಾಜ ಮಬನೂರ, ಕ್ರೈಮ್ ಪಿಎಸೈ ಎನ್.ಡಿ.ಜಕ್ಕಣ್ಣವರ, ಪ್ರೋಬಶನರಿ ಪಿಎಸ್ಐ ಕವಿತಾ ಕುಕನೂರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು