ಸಿದ್ದಾಪುರದಲ್ಲಿ ಹೊಳೆಗೆ ಧುಮುಕಿದ ಕಾರು. ಮೂವರ ಜಲಸಮಾಧಿ.
ಸಿದ್ದಾಪುರ: ಶಿರಸಿ ಮತ್ತು ಸಿದ್ದಾಪುರ ಮಧ್ಯೆದ ಹೆಗ್ಗರಣಿ ಬಳಿ ಹೊಳೆಗೆ ಕಾರು ಧುಮುಕಿ ಬಿದ್ದ ಪರಿಣಾಮ ಮೂವರು ಜಲಸಮಾಧಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿ ಮೂಲದ ನಿಶ್ಚಲ್, ಅಕ್ಷತಾ ಹಾಗೂ ಸುಷ್ಮಾ ಮೃತ ದುರ್ದೈವಿಗಳು. ಇನ್ನಿಬ್ಬರು ನಾಪತ್ತೆಯಾಗಿರುವ ಬಗ್ಗೆ ಶಂಕಿಸಲಾಗಿದೆ.
ಉಂಚಳ್ಳಿ ಫಾಲ್ಸ್ ನೋಡಿ ಬುಧವಾರ ಸಂಜೆ ವೇಳೆ ವಾಪಸ್ಸಾಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಸೇತುವೆಯ ಬದಿಯಿಂದ ಹೊಳೆಗೆ ಧುಮುಕಿದೆ.
ಗುರುವಾರ ಮಧ್ಯಾಹ್ನ ಸ್ಥಳೀಯರು ಗಮನಿಸಿ ಸಿದ್ದಾಪುರ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಸ್ಥಳೀಯರ ಸಹಕಾರದಿಂದ ಕಾರು ಮೇಲಕ್ಕೆತ್ತಲಾಗಿದ್ದು, ಕಾರಿನಲ್ಲಿ ಮೂವರ ಮೃತದೇಹ ದೊರೆತಿದೆ.
ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಜಿ.ಟಿ.ನಾಯಕ ಸೇರಿದಂತೆ ಸ್ಥಳೀಯ ಪೊಲೀಸರು ಭೇಟಿದ್ದು ಘಟನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ.