ಜಾತಿ ಬೇರೆ ಬೇರೆ ತಾಳಿಕಟ್ಟುವ ವೇಳೆ ಮುರಿದು ಬಿದ್ದ ಮದುವೆ

Source: S.O. News Service | By MV Bhatkal | Published on 18th July 2019, 7:19 PM | Coastal News | Don't Miss |

ಸುಬ್ರಹ್ಮಣ್ಯ: ಇನ್ನೇನು ತಾಳಿ ಕಟ್ಟುವ ಶಾಸ್ತ್ರ ಮಾತ್ರ ಉಳಿದಿತ್ತು.ಆ ವೇಳೆ ತಮ್ಮಿಬ್ಬರ ಜಾತಿ ಬೇರೆ ಬೇರೆ ಎಂದು ತಿಳಿದ ವಧು ಮತ್ತು ವರರು ಮದುವೆಯಾಗಲು ನಿರಾಕರಿಸಿದ್ದು, ಬಳಿಕ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಪ್ರಸಂಗ ಸುಳ್ಯ ತಾಲೂಕಿನ ಹರಿಹರಪಳ್ಳತಡ್ಕದಲ್ಲಿ ನಡೆದಿದೆ.
ಪಿರಿಯಾಪಟ್ಟಣ ಮೂಲದ ವರ ಮತ್ತು ಉಪ್ಪಿನಂಗಡಿ ಹಿರೇಬಂಡಾಡಿಯ ವಧುವಿಗೆ ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕದ ಶ್ರೀಹರಿಹರೇಶ್ವರ ಸಭಾಭವನದಲ್ಲಿ ಮದುವೆ ನಿಗದಿಪಡಿಸಲಾಗಿತ್ತು.
ಪಿರಿಯಾಪಟ್ಟಣದ ಯುವಕ ಉಪ್ಪಿನಂಗಡಿಯ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಾಗ ಅಲ್ಲಿ ಸಿಕ್ಕಿದ ಮದುವೆ ಬ್ರೋಕರ್ ಒಬ್ಬರಲ್ಲಿ ನನಗೆ ವಧುವಿದ್ದರೆ ನೋಡುವಂತೆ ತಿಳಿಸಿದ್ದರು. ಆಗ ದಳ್ಳಾಳಿ ಅದೇ ಮದುವೆಗೆ ಬಂದಿದ್ದ ಯುವತಿಯೊಬ್ಬರನ್ನು ತೋರಿಸಿದ್ದರು. ಬಳಿಕ ಹಿರಿಯರ ಸಮಕ್ಷಮದಲ್ಲಿ ಮಾತುಕತೆ ನಡೆದು, ಮದುವೆ ದಿನವೂ ನಿಗದಿಯಾಯಿತು.
ಮದುವೆಯ ವಿಧಿವಿಧಾನಗಳು ಆರಂಭವಾಗಿ ಧಾರಾ ಮುಹೂರ್ತ ಮಾತ್ರ ಬಾಕಿಯಿತ್ತು. ಈ ಸಂದರ್ಭ ಮದುವೆ ಧಾರ್ಮಿಕ ವಿಧಿ ವಿಧಾನಗಳು ಬೇರೆ ಬೇರೆಯಾಗಿದ್ದುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎರಡೂ ಕಡೆಯವರು ಮಾಹಿತಿ ಪಡೆದಾಗ ವಧು-ವರರು ಬೇರೆ ಬೇರೆ ಜಾತಿಯವರು ಎಂದು ಗೊತ್ತಾಗಿದೆ.
ಬಳಿಕ ಎರಡು ಕಡೆಯ ಹಿರಿಯರು ಮಾತುಕತೆ ನಡೆಸಿ ಮದುವೆ ಕಾರ್ಯಕ್ರಮ ಸ್ಥಗಿತಗೊಳಿಸಿದರು. ಇದಕ್ಕೆ ವಧು-ವರರೂ ಸಮ್ಮತಿ ಸೂಚಿಸಿದರು. ವಿಷಯ ತಿಳಿದ ಹರಿಹರೇಶ್ವರ ದೇವಳದ ಮ್ಯಾನೇಜರ್ ಲೋಕನಾಥ ಕಿರಿಭಾಗ ಅವರು ಸುಬ್ರಹ್ಮಣ್ಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೋಲಿಸರು ವಧು-ವರ ಹಾಗೂ ಇಬ್ಬರ ಮನೆಯವರನ್ನು ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದರು. ಘಟನೆಗೆ ಸಂಬಂಧಿಸಿ ಉಭಯ ಕಡೆಯವರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸಿಕೊಟ್ಟರು. ಸಭಾಭವನದ ಬಾಡಿಗೆ, ಊಟೋಪಚಾರದ ಬಿಲ್‌ಅನ್ನು ಎರಡು ಕಡೆಯವರು ಸೇರಿ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...