ಯಲ್ಲಾಪುರ: ಕಾರಿಗೆ ಲಾರಿ ಡಿಕ್ಕಿ :ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲೇ ಸಾವು
ಕಾರವಾರ:- ಲಾರಿ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತಿದ್ದ ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲೇ ಸಾವು ಕಂಡು ಚಾಲಕ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63 ರ ಹಿಟ್ಟಿನಬೈಲ್ ಬಳಿ ನಡೆದಿದೆ.
ಹುಬ್ಬಳ್ಳಿ ಮೂಲದ ಬರೋಡ ಬ್ಯಾಂಕ್ ನ ಮ್ಯಾನೇಜರ್ ಸುನಿಲ್ ಚರಣ್ ಪಾಂಡೆ ಸಾವುಕಂಡವರಾಗಿದ್ದು
ಚಾಲಕ ಸುಬ್ರಂ ಬಾಲಕೃಷ್ಣ ತೀರ್ವ ಗಾಯಗೊಂಡವರಾಗಿದ್ದು ಗಾಯಗೊಂಡ ಕಾರು ಚಾಲಕನನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ