ಶಿರಸಿ : ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾದ ಪುಂಡ ರೌಡಿಗಳ ಪರೇಡನ್ನ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಆವರಣದಲ್ಲಿ ನಡೆಸಲಾಯಿತು.
ಶಿರಸಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕರವರ ಮಾರ್ಗದರ್ಶದಲ್ಲಿ
ಶಿರಸಿ ವೃತ್ತ ನಿರೀಕ್ಷಕರಾದ ಪ್ರದೀಪ್ ಬಿ.ಯು ರವರು ರೌಡಿಶೀಟರ್ ಗಳಿಗೆ ಸಮಾಜದಲ್ಲಿ ಅಶಾಂತಿ,ಗಲಭೆ,ಕಾನೂನು ವಿರೋಧಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಠಿಣಕ್ರಮ ಕೈಗೊಂಡು ಗಡಿಪಾರು ಮಾಡುವ ಖಡಕ್ ಎಚ್ಚರಿಕೆ ನೀಡಿದರು.
ಸಮಾಜದಲ್ಲಿಉತ್ತಮ ರೀತಿಯಿಂದ ಗೌರವಯುತವಾದ ಜೀವನ ನಡೆಸಿಕೊಂಡು ಹೋಗಿ ಎಂಬ ಕಿವಿಮಾತನ್ನ ಈ ಸಂದರ್ಭದಲ್ಲಿ ಹೇಳಿದರು.
ಶಿರಸಿ ಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ,ನಗರಠಾಣೆಯ ಪಿಎಸ್ಐ ಶಿವಾನಂದ ನಾವದಗಿ, ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ಯಾಮ ಪಾವಸ್ಕರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.