ದುಬಾಯಿ ಅಲ್ ನಾಸರ್‍ನಲ್ಲಿ ಅನಾವರಣಗೊಂಡ `ವಿಶ್ವ ತುಳು ಸಮ್ಮೇಳನ ದುಬಾಯಿ'

Source: sonews | By Staff Correspondent | Published on 25th November 2018, 4:13 PM | National News | Gulf News | Don't Miss |

            ಬ್ರಹ್ಮಾಂಡದೊಳಗೆ ಅರಸಿ ಬಾಳಲು ತುಳುನಾಡೇ ವಾಸಿ:ಡಾ|ವೀರೇಂದ್ರ ಹೆಗ್ಗಡೆ 

ದುಬಾಯಿ (ಅಲ್ ನಾಸರ್):ದೈವದೇವರುಗಳೆಲ್ಲವೂ ನಮ್ಮ ತುಳುನಾಡಿನಲ್ಲೇ ನೆಲೆಯಾಗಿವೆ. ಆದುದರಿಂದ ತುಳುವರು ಸಂಪ್ರದಾಯಸ್ಥರಾಗಿ ಬದುಕು ಕಂಡುಕೊಂಡವರಾಗಿದ್ದಾರೆ. ತುಳುನಾಡ ಹಿರಿಮೆ, ಗರಿಮೆ ಏನೆಂದು ತಿಳಿಯ ಬೇಕಾದರೆ ಹೊರನಾಡಿನಲ್ಲಿ ತಿಳಿಯಬೇಕು. ದುಬಾಯಿ ಅಂದರೆ ಬಂಗಾರದ ನಾಡು. ರಾಜ ಕುಟುಂಬಸ್ಥರು ಆಳಿದ ಈ ನಾಡಿಗೆ ತುಳುವರು ಬಂದು ಸಾಧಕರೆಣಿಸುತ್ತಿರುವುದು ತುಳುಮಾತೆಯ ಅನುಗ್ರಹವೇ ಸರಿ. ಇದು ಸ್ವರ್ಣಮಯ ದೇಶ ಎಂದೇ ಪ್ರಸಿದ್ಧಿ ಪಡೆದಿದ್ದು ಇಲ್ಲಿ ತುಳುನಾಡ ಸಂಸ್ಕೃತಿ, ಭಾಷೆ ಮೇಳೈಸುತ್ತಿರುವುದು ತುಳುನಾಡ ವೈಷ್ಟ ್ಯವಾಗಿದೆ ಎಂದು ಭಾರತದ ಸಾಂಸ್ಕೃತಿಕ ರಾಯಭಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.

ಸಾಗರೋತ್ತರ ತುಳುವರ ಕೂಟವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲಭಾರತ ತುಳು ಒಕ್ಕೂಟದ ಸಹಯೋಗದೊಂದಿಗೆ ಅರಬ್ ಸಂಯುಕ್ತ ಸಂಸ್ಥಾನದ ದುಬಾಯಿ (ಯುಎಇ) ಅಲ್ ನಾಸರ್ ಅಲ್ಲಿನ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಿಶ್ವದ ತುಳುವರ ದ್ವಿದಿನಗಳ `ವಿಶ್ವ ತುಳು ಸಮ್ಮೇಳನ ದುಬಾಯಿ 2018'ನ್ನು ಇಂದಿಲ್ಲಿ ಶುಕ್ರವಾರ ಅಪರಾಹ್ನ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಡಾ| ಹೆಗ್ಗಡೆ ಮಾತನಾಡಿದರು. 

ಬ್ರಹ್ಮಾಂಡದೊಳಗೆ ಅರಸಿ ಬಾಳಲು ತುಳುನಾಡೇ ವಾಸಿ ಅಂದಾಗಲೇ ಈ ಹೊರನಾಡ ತುಳು ಸಮ್ಮೇಳನದ ಉದ್ದೇಶ ಪರಿಪೂರ್ಣ ಆಗುವುದು. ತುಳುವರು ಮತ್ತಷ್ಟು ಸ್ವಾಭಿಮಾನಿಗಳಾಗಿ ಸಾಧನೆಗಳ ಮೂಲಕ ಮುನ್ನಡೆಯಬೇಕು ಎಂದೂ ಡಾ| ಹೆಗ್ಗಡೆ ಸಮಗ್ರ ತುಳುವರಿಗೆ ಕರೆಯಿತ್ತರು. 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದುಬಾಯಿ ಯುಎಇ ಸಹನಾಶೀಲಾ ಸಚಿವ (ಟೊಲರೆನ್ಸ್ ಮಿನಿಸ್ಟರ್) ಶೇಖ್ ಮಬರಕ್ ಆಲ್ ನಹ್ಯನ್ ಉಪಸ್ಥಿತರಿದ್ದು ಸಹನೆ-ಸಹಬಾಳ್ವೆಗೆ ತುಳುವರು ಮಾದರಿ. ತುಳುವರು ಎಲ್ಲಿದ್ದರೂ ಸಾಂಘಿಕವಾಗಿ ಜೀವನ ರೂಪಿಸಿ ಅನ್ಯರನ್ನು ಒಗ್ಗೂಡಿಸುವ ಸದ್ಗುಣರು. ಕಾಯಕ ನಿಮಿತ್ತ ದುಬಾಯಿನಲ್ಲಿ ನೆಲೆಯಾದರೂ ತಮ್ಮ ಕೆಲಸ, ಕಾರುಬಾರುಗಳಿಂದ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿದ ಕೀರ್ತಿ ತುಳುವರದ್ದು. ಆದುದರಿಂದಲೇ ಭಾರತ ಮತ್ತು ಯುಎಇ ಸಂಬಂಧ ಅನ್ಯೋನ್ಯತೆಯಿಂದ ಮುಂದುವರಿದ ಕಾರಣ ಇಂತಹ ತುಳು ಸಮ್ಮೇಳನಕ್ಕೆ ಸಂಧಿಯಾಯಿತು ಎಂದು ಮಧ್ಯೆಮಧ್ಯೆ ತುಳುವಿನಲ್ಲೇ ಮಾತನಾಡಿ ತುಳುವರನ್ನು ಹುರಿದುಂಬಿಸಿದರು. 

ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮತ್ತು ಬಳಗದ ಸಾರಥ್ಯ ಮತ್ತು ಎನ್‍ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ಆರಂಭಗೊಂಡ ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ರೋಮನ್ ಕ್ಯಾಥೋಲಿಕ್ ಮಂಗಳೂರು ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ, ಸಿಎಸ್‍ಐ ಪೆಟೆಸ್ಟೆಂಟ್ ಮಂಗಳೂರು ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ವಂ| ಎಬಿನೆಜರ್ ಜತ್ತನ್ನ, ರೋಮನ್ ಕ್ಯಾಥೋಲಿಕ್ ಬಳ್ಳಾರಿ ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅ| ವಂ| ಡಾ| ಹೆನ್ರಿ ಡಿಸೋಜಾ, ಮುಸ್ಲಿಂ ಧರ್ಮಶಾಸ್ತ್ರಜ್ಞ ಅಬ್ದುಸ್ಸಲಾಂ ಪುತ್ತಿಗೆ, ಕರ್ನಾಟಕದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಯು.ಟಿ ಖಾದರ್, ಕರ್ನಾಟಕದ ಮಹಿಳಾ-ಮಕ್ಕಳ ಕಲ್ಯಾಣ, ಕನ್ನಡ-ಸಂಸ್ಕೃತಿ ಖಾತೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವೆ ಡಾ| ಜಯಮಾಲ ಹಾಗೂ ಗೌರವ ಅತಿಥಿüಗಳಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊೈಲಿ, ಆಳ್ವಾ'ಸ್ ಎಜ್ಯುಕೇಶನ್ ಟ್ರಸ್ಟ್ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಅನಿವಾಸಿ ಭಾರತೀಯ ಉದ್ಯಮಿಗಳಾದ  ರೋನಾಲ್ಡ್ ಕೊಲಾಸೋ ಮತ್ತು ಸುಜಾತ್ ಶೆಟ್ಟಿ, ಬಸವ ಸಮಿತಿ ಅಧ್ಯಕ್ಷ ಬಸವ ಜತ್ತಿ, ಚಂದ್ರಕಲಾ ಬಿ.ಆರ್ ಶೆಟ್ಟಿ, ಸಂಗೀತ ನಿರ್ದೇಶಕ ಗುರು ಕಿರಣ್ ಹಾಗೂ ಕರ್ನಾಟಕರ ರಾಜ್ಯ ತುಳು ಅಕಾಡಮಿ ಅಧ್ಯಕ್ಷ ಎ.ಸಿ ಭಂಡಾರಿ, ಅಖಿಲಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ವೇದಿಕೆಯಲ್ಲಿ ಆಸೀನರಾಗಿದ್ದರು. 

ನಶ್‍ವನ್ ಸಭಾಗೃಹದ ಮುಂಭಾಗ ಧ್ವಜಾರೋಹನಗೈದು ಅತಿಥಿüಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ರಾಣಿ ಅಬ್ಬಕ್ಕ, ಅಬ್ಬಗ ದರಗ, ಕೋಟಿ-ಚನ್ನಯ, ರೆವರೆಂಡ್ ಕಿಟ್ಟಲ್, ಅಗೋಲಿ ಮಂಜಣ್ಣ, ಡಾ| ಕಯ್ಯಾರ ಕಿಂಜಣ್ಣ ರೈ ಅವರನ್ನು ಸ್ಮರಿಸಲಾಯಿತು. ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸ್ವಾಗತಿಸಿ ಪ್ರಸ್ತಾವನೆಗೈದರು. ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ| ಬಿ.ಆರ್ ಶೆಟ್ಟಿ ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಸಾಗರೋತ್ತರ ಕೊಲ್ಲಿ ರಾಷ್ಟ್ರದ ತುಳುವರ ಒಕ್ಕೂಟ ದುಬಾಯಿ ಮುಖ್ಯಸ್ಥ ಶೋಧನ್ ಪ್ರಸಾದ್ ವಂದನಾರ್ಪಣೆಗೈದರು.

ಸಾಂಸ್ಕøತಿಕ ಕಾರ್ಯಕ್ರಮವಾಗಿ ಗಲ್ಫ್ ರಾಷ್ಟ್ರದ ಸುಮಾರು ಆರು ತಂಡಗಳು ಸಮೂಹ ಜಾನಪದ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಅಂತೆಯೇ ಚಕ್ರಪಾಣಿ ನೃತ್ಯ ಕೇಂದ್ರವು ಸುರೇಶ್ ಅತ್ತಾವರ ಮಂಗಳೂರು ಸಾರಥ್ಯದಲ್ಲಿ `ತುಳುನಾಡ ಪರ್ಬೊಲು' ನೃತ್ಯ ರೂಪಕ, ಯಕ್ಷಮಿತ್ರರು ದುಬಾಯಿ ಮಂಡಳಿ `ಜಾಂಬವತಿ ಕಲ್ಯಾಣ'ತುಳು ಯಕ್ಷಗಾನ ಪ್ರಸಂಗವನ್ನು,  ದುಬಾಯಿ ಹವ್ಯಾಸಿ ಕಲಾವಿದ ಕೂಡುವಿಕೆಯಲ್ಲಿ ಗಿರೀಶ್ ನಾರಾಯಣ್ ನಿರ್ದೇಶನದಲ್ಲಿ `ಪಿಲಿನಲಿಕೆ' (ಹುಲಿವೇಷ ಕುಣಿತ), ಪ್ರಸನ್ನ ಕಾಪು ಬಳಗದ ಬಲೇ ತೆಲಿಪಾಲೆ ತಂಡ ಮತ್ತು ಉಮೇಶ್ ಮಿಜಾರು ತಂಡಗಳು ಹಾಸ್ಯ ಪ್ರಹಸನ, ಸತೀಶ್ ಶೆಟ್ಟಿ ಪಟ್ಲ ಮತ್ತು ತಂಡವು  `ಯಕ್ಷಗಾನ ನಾಟ್ಯ  ವೈಭವ', ಮತ್ತು `ಯಕ್ಷಗಾನ ಹಾಸ್ಯ ವೈಭವ' ಸಾದರ ಪಡಿಸಿದರು  ಮತ್ತು ಪ್ರಮೋದ್ ಕುಮಾರ್ ಬಳಗದ ವೆರಾಸಟೈಲ್ಸ್ ದುಬಾಯಿ ತಂಡವು ರಸ ಮಂಜರಿ ನಡೆಸಿದರು. ಕದ್ರಿ ನವನೀತ್ ಶೆಟ್ಟಿ ಮತ್ತು ಸಾಹಿಲ್ ರೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. 

ಅಭಾತುಒ ಇದರ ಗೌ| ಪ್ರ| ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಹಾಗೂ ಆಲ್ ಇಂಡಿಯಾ ಟ್ರಾನ್ಸ್‍ಪೆÇೀರ್ಟ್ ಕಾಂಗ್ರೇಸ್‍ನ ಕರ್ನಾಟಕ ರಾಜ್ಯಧ್ಯಕ್ಷ ಸುನೀಲ್ ಪಾಯ್ಸ್ ಪುತ್ತೂರು, ಹೆಸರಾಂತ ವಾಸ್ತುತಜ್ಞ , ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಸಯಾನ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ದುಬಾಯಿಯ ಪ್ರತಿಷ್ಠಿತ ಉದ್ಯಮಿ ಪ್ರವೀಣ್ ಶೆಟ್ಟಿ ವಾಕ್ವಾಡಿ, ಸುಧೀರ್‍ಕುಮಾರ್ ಶೆಟ್ಟಿ, ಶೀಲಾ ಸುಧೀರ್ ಕುಮಾರ್, ಚಂದ್ರಶೇಖರ್ ಆರ್.ಬೆಲ್ಚಡ, ಕರ್ನೂರು ಮೋಹನ್ ರೈ, ನಾರಾಯಣ ಕಾಪು(ದುಬಾಯಿ), ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ತುಳು ಸಂಘ ಬರೋಡಾ, ತುಳುಕೂಟ ಅಂಲ್ಕೇಶ್ವರ, ವಿಶ್ವ ತುಳುವೆರೆ ಆಯೋನದಿಂದ ನೂರಾರು ತುಳುವರು ಆಗಮಿಸಿದ್ದರು. 

ಸಂಪ್ರದಾಯಸ್ಥ ಉಡುಗೆ-ತೊಡುಗೆ: ತುಳುನಾಡ ಜನತೆಯ ತಿಂಡಿತಿನಿಸುಗಳು
ಪಾಲ್ಗೊಂಡ ಸಂಪ್ರದಾಯಸ್ಥರಿಗೆ ಸಾಂಪ್ರದಾಯದಂತೆಯೇ ಬರಮಾಡಿ ಕೊಳ್ಳಲಾಯಿತು. ಕೃಷಿಕ ಸಂಪ್ರದಾಯಸ್ಥ ತುಳುನಾಡ ಜನತೆಯ ತಿಂಡಿತಿನಿಸುಗಳೂ ಬಂದಂತಹ ಗಣ್ಯರಿಗೆ ಮಹಿಳಾ ಮಣಿಯರು ಪರಂಪರಿಕಾ ರುಚಿರುಚಿಕರ ಬಿಸಿಬಿಸಿಯಾದ ಫಲಹಾರ, ಊಟೋಪಚಾರ ದೊಂದಿಗೆ ಉಣಬಡಿಸಿದರು. ದೇವೇಶ್ ಆಳ್ವ ದುಬಾಯಿ ಇವರ ಉಸ್ತುವರಿಯಲ್ಲಿ ತುಳುನಾಡ ಶೈಲಿಯ ಘಮಘಮ ಪರಿಮಳ ಭರಿತ ಬಗೆಬಗೆಯ ತಿಂಡಿ ತಿಸಿಸುಗಳು ಸಿದ್ಧಗೊಂಡಿದ್ದು, ಉಪಸ್ಥಿತರೆಲ್ಲರ ಬಾಯಲ್ಲೂ ನೀರಿಳಿಸುತ್ತಾ ಮನಸೆಳೆಯುವಂತಿತ್ತು. 

ಜುಬೇರ್ ಖಾನ್ ಮಂಗಳೂರು ಮತ್ತು ಬಳಗವು ತುಳುನಾಡ ಪರಂಪರೆಯ ವಸ್ತುಪ್ರದರ್ಶನ ಆಯೋಜಿಸಿದ್ದು ಆಕರ್ಷಿತವಾಗಿ ಸರ್ವರ ಮನಸೆಳೆಯಿತು. ನಿರೀಕ್ಷೆಗೂ ಮಿಕ್ಕಿ ತುಂಬಿತುಳುಕಿದ ತುಳುವರಿಂದ ತುಳುನಾಡು ಇಂದು ದುಬಾಯಿಯಲ್ಲಿದೆಯೋ ಅಥವ ದುಬಾಯಿ ತುಳುನಾಡುನಲ್ಲಿದೆಯೋ ಅನ್ನುವಂತಿತ್ತು. ಅಂತೂ ಸಾಧಕ ದುಬಾಯಿ ತುಳುವರಿಂದ ದುಬಾಯಿ ತುಳುನಾಡಿಗೆ ಸಾಮೀಪ್ಯವಾಗಿದೆ ಎಂದು ತೋರ್ಪಡಿಸಿತು.

(ಚಿತ್ರ  /  ವರದಿ : ರೊನಿಡಾ ಮುಂಬಯಿ)

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...