ಮುಂಡಗೋಡ : ಕಾಡನೆಯ ದಾಳಿಯಿಂದ ಬೆಳೆದು ನಿಂತ ಪೈರು ನಾಶವಾದ ಘಟನೆ ತಾಲೂಕಿನ ಗುಂಜಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಸಂಭವಿಸಿದೆ
ಕಾಡಾನೆಯ ಹಿಂಡು ನುಗ್ಗಿ ಒಂದು ಎಕರೆ ಭತ್ತದ ಬೆಳೆ ನಾಶ ಮಾಡಿದೆ ಎಂದು ಅರಣ್ಯ ಇಲಾಖೆಯವರಿಂದ ಮಾತು ಕೇಳಿಬಂದಿದೆ.
ಕಳೆದ ಕೆಲವು ದಿನಗಳಿಂದ ಎರಡು ಗಂಡಾನೆ, ಎರಡು ಹೆಣ್ಣಾನೆ ಮತ್ತು ಎರಡು ಮರಿಯಾನೆಗಳ ಹಿಂಡು ಗುಂಜಾವತಿ ಉಪವಲಯದ ಕಾಡಿನ ಅಂಚಿನಲ್ಲಿರುವ ಮೈನಳ್ಳಿ, ಗುಂಜಾವತಿ, ಗೊದನಾಳ, ಕಳಕಿಕಾರ, ಬಸನಾಳ ಮತ್ತು ಉಗ್ಗಿನಕೇರಿ ಗ್ರಾಮಗಳ ಹೊಲಗಳಲ್ಲಿ ನುಗ್ಗಿ ಅಡಿಕೆ, ಭತ್ತ ಮತ್ತು ವಿವಿಧ ಬೆಳೆ ಹಾನಿ ಮಾಡಿ ಹಲವು ರೈತರ ಬೆಳೆಯನ್ನು ನಾಶ ಪಡಿಸಿವೆ ಮತ್ತೆ ಬುಧವಾರ ಬೆಳಗಿನ ಜಾವ ಗೊದನಾಳ, ಕಳಕಿಕಾರ, ಮತ್ತು ಕುದುರೆನಾಳದ ಭಾಗದ ರೈತರ ಜಮೀನುಗಳಲ್ಲಿ ನುಗ್ಗಿದ್ದ ಕಾಡಾನೆಯ ಹಿಂಡು ಒಂದು ಎಕರೆ ಭತ್ತದ ಬೆಳೆ ನಾಶ ಮಾಡಿವೆ.
ಕಳಕಿಕಾರ ಗ್ರಾಮದ ಢಾಕ್ಲು ನಾನಾ ಪಾಟೀಲ ಎಂಬ ರೈತನ ಗದ್ದೆಗೆ ನುಗ್ಗಿದ ಕಾಡಾನೆಗಳು ಸುಮಾರು ಒಂದು ಎಕರೆಯಷ್ಟು ಭತ್ತದ ಗದ್ದೆಯನ್ನು ತಿಂದು ತುಳಿದು ನಾಶ ಮಾಡಿವೆ. ಅಲ್ಲದೆ ಮತ್ತೊರ್ವ ರೈತನ ಗದ್ದೆಯಲ್ಲಿದ್ದ ಹುಲ್ಲಿನ ಬಣವೆಯನ್ನು ಧ್ವಂಸ ಮಾಡಿವೆ. ಇದರಿಂದ ರೈತರು ಕಂಗಾಲಾಗಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮನೆಮಾಡಿದೆ.
ಪ್ರತಿ ವರ್ಷವೂ ಫಸಲು ಬೆಳೆದು ನಿಂತು ಇನ್ನೆನು ರೈತರು ಫಸಲನ್ನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ತಿಂದು ತುಳಿದು ನಾಶಪಡಿಸುತ್ತಾ ಹೋಗುತ್ತಿವೆ. ಸಾಲಸೋಲ ಮಾಡಿ ಬೆಳೆಯನ್ನು ತೆಗೆದು ಮಾರಿ ಸಾಲ ತೀರಿಸಬೇಕು ಎಂದು ಕನಸು ಕಾಣುತ್ತಿರುವ ರೈತನ ಕನಸು ನುಚ್ಚುನೂರು ಮಾಡುತ್ತಿವೆ ಆನೆಗಳು ಅರಣ್ಯ ಇಲಾಖೆ ಕಾಡಾನೆಗಳಿಂದ ಬೆಳೆ ರಕ್ಷಿಸುವ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯವಾಗಿದೆ.