ಟಿಬೇಟ್ ಕ್ಯಾಂಪ್‍ಗೆ ಎಎಸ್‍ಪಿ ನಾಗೇಶ ಭೇಟಿ

Source: sonews | By Staff Correspondent | Published on 12th October 2018, 5:18 PM | Coastal News |

ಮುಂಡಗೋಡ : ತಾಲೂಕಿನ ಟಿಬೆಟಿಯನ್ ಕಾಲೋನಿ ನಂ3 ರಲ್ಲಿ ಗುರುವಾರ ಎಎಸ್‍ಪಿ ಡಿ.ಎಲ್.ನಾಗೇಶ ಟಿಬೆಟಿಯನ್ ಮುಖಂಡರ ಜೊತೆ ಆಂತರಿಕ ಭದ್ರತೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.

ಶಿರಸಿ ಎಎಸ್‍ಪಿ ಡಿ.ಎಲ್.ನಾಗೇಶ ಮಾತನಾಡಿ ಅಪರಿಚಿತರು ಟಿಬೇಟ್ ಕ್ಯಾಂಪ್ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡಬಾರದು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಬೇಕು. ಹೊರ ದೇಶದಿಂದ ಬರುವ ಪ್ರವಾಸಿ ವಿದೇಶಿಗರ ಪಿ.ಎ.ಪಿ. ಸರಿಯಾಗಿ ತಪಾಸಣೆಯಾಗಬೇಕು ಮತ್ತು ಪಿ.ಎ.ಪಿ ಇಲ್ಲದ ವಿದೇಶಿ ಪ್ರವಾಸಿಗರಿಗೆ ಮೊನಸ್ಟ್ರಿಗಳಲ್ಲಿ ಉಳಿದುಕೊಳ್ಳಲು ಅನಕೂಲ ಮಾಡಿಕೊಡಬಾರದೆಂದು ಸೂಚಿಸಿದರು.

ದಲೈಲಾಮ ವಿರೋದಿ ಬಣವಾದ ಶುಗ್ಡೇನ್ ಮೊನಸ್ಟ್ರಿಯ ಯಾವುದಾದರೂ ಲಾಮಗಳು ದಲೈಲಾಮ ಬಣದ ಲಾಮಾಗಳೊಂದಿಗೆ ಸ್ನೇಹ  ಮಾಡಿ ಮಾಹಿತಿ ಕದಿಯದಂತೆ ನೋಡಿಕೊಳ್ಳಬೇಕು. ರಾತ್ರಿ ವೇಳೆ ಕೆಲವು ಲಾಮಾಗಳು ಮದ್ಯ ಸೇವಿಸಲು ಹೋಗುತ್ತಿದ್ದು ಅವರು ಮಾದಕ ವಸ್ತುಗಳನ್ನು ತರುವ ಬಗ್ಗೆ  ಮಾಹಿತಿ ಇದೆ. ಈ ವೇಳೆ ನಾವುಗಳು ತಪಾಸಣೆ ನಡೆಸುವ ವೇಳೆ ಸಿಕ್ಕಿಬಿದ್ದರೆ ಕಾನೂನಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.

ಎಎಸ್‍ಪಿ ಡಿ.ಎಲ್.ನಾಗೇಶ ಹಾಗೂ ಪಿಎಸ್‍ಆಯ್ ಚಂದ್ರಶೇಖರ ಹರಿಹರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ 10 ಸಿವಿಲ್ ಕ್ಯಾಂಪ್ ಗಳ ಲೀಡರ್ಸ  ಹಾಗೂ ಲಾಮಾಕ್ಯಾಂಪ್ ಧುರಿಣರು ಉಪಸ್ಥಿತರಿದ್ದರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...