ಮುಂಡಗೋಡ : ತಾಲೂಕಿನ ಟಿಬೆಟಿಯನ್ ಕಾಲೋನಿ ನಂ3 ರಲ್ಲಿ ಗುರುವಾರ ಎಎಸ್ಪಿ ಡಿ.ಎಲ್.ನಾಗೇಶ ಟಿಬೆಟಿಯನ್ ಮುಖಂಡರ ಜೊತೆ ಆಂತರಿಕ ಭದ್ರತೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.
ಶಿರಸಿ ಎಎಸ್ಪಿ ಡಿ.ಎಲ್.ನಾಗೇಶ ಮಾತನಾಡಿ ಅಪರಿಚಿತರು ಟಿಬೇಟ್ ಕ್ಯಾಂಪ್ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡಬಾರದು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಬೇಕು. ಹೊರ ದೇಶದಿಂದ ಬರುವ ಪ್ರವಾಸಿ ವಿದೇಶಿಗರ ಪಿ.ಎ.ಪಿ. ಸರಿಯಾಗಿ ತಪಾಸಣೆಯಾಗಬೇಕು ಮತ್ತು ಪಿ.ಎ.ಪಿ ಇಲ್ಲದ ವಿದೇಶಿ ಪ್ರವಾಸಿಗರಿಗೆ ಮೊನಸ್ಟ್ರಿಗಳಲ್ಲಿ ಉಳಿದುಕೊಳ್ಳಲು ಅನಕೂಲ ಮಾಡಿಕೊಡಬಾರದೆಂದು ಸೂಚಿಸಿದರು.
ದಲೈಲಾಮ ವಿರೋದಿ ಬಣವಾದ ಶುಗ್ಡೇನ್ ಮೊನಸ್ಟ್ರಿಯ ಯಾವುದಾದರೂ ಲಾಮಗಳು ದಲೈಲಾಮ ಬಣದ ಲಾಮಾಗಳೊಂದಿಗೆ ಸ್ನೇಹ ಮಾಡಿ ಮಾಹಿತಿ ಕದಿಯದಂತೆ ನೋಡಿಕೊಳ್ಳಬೇಕು. ರಾತ್ರಿ ವೇಳೆ ಕೆಲವು ಲಾಮಾಗಳು ಮದ್ಯ ಸೇವಿಸಲು ಹೋಗುತ್ತಿದ್ದು ಅವರು ಮಾದಕ ವಸ್ತುಗಳನ್ನು ತರುವ ಬಗ್ಗೆ ಮಾಹಿತಿ ಇದೆ. ಈ ವೇಳೆ ನಾವುಗಳು ತಪಾಸಣೆ ನಡೆಸುವ ವೇಳೆ ಸಿಕ್ಕಿಬಿದ್ದರೆ ಕಾನೂನಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.
ಎಎಸ್ಪಿ ಡಿ.ಎಲ್.ನಾಗೇಶ ಹಾಗೂ ಪಿಎಸ್ಆಯ್ ಚಂದ್ರಶೇಖರ ಹರಿಹರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 10 ಸಿವಿಲ್ ಕ್ಯಾಂಪ್ ಗಳ ಲೀಡರ್ಸ ಹಾಗೂ ಲಾಮಾಕ್ಯಾಂಪ್ ಧುರಿಣರು ಉಪಸ್ಥಿತರಿದ್ದರು