ಮುಂಡಗೋಡ: ವಾಹನ ಡಿಕ್ಕಿಯಿಂದ ನರಿಯೊಂದು ಸಾವನ್ನಪ್ಪಿದೆ ಘಟನೆ ಮಂಗಳವಾರ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಸಂಭವಿಸಿದೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನರಿ ಮೃತಪಟ್ಟಿದ್ದು ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೆಲ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ನಾಯಿಗಳ ದಾಳಿಗೆ ಬಲಿಯಾದರೆ ಮತ್ತೆ ಕೆಲ ಪ್ರಾಣಿಗಳು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ.
ಕಳೆದ ತಿಂಗಳು ಇದೆ ಮಾರ್ಗದಲ್ಲಿ ವಾಹನಕ್ಕೆ ಸಿಲುಕಿ ನರಿಯೊಂದು ಸಾವನ್ನಪ್ಪಿತ್ತು ಇದೀಗ ಮತ್ತೊಂದು ನರಿಯೂ ವಾಹನಕ್ಕೆ ಸಿಲುಕಿ ಸಾವನ್ನಪ್ಪಿದೆ. ಕಳೆದ ವರ್ಷವೂ ಈ ಮಾರ್ಗದಲ್ಲಿ ಅಪರಿಚಿತ ವಾಹನಕ್ಕೆ ಸಿಲುಕಿ ಜಿಂಕೆಯೊಂದು ಸಾವನ್ನಪ್ಪಿತ್ತು. ಶಿರಸಿ, ಹುಬ್ಬಳ್ಳಿ ಹಾಗೂ ಯಲ್ಲಾಪುರ, ಬಂಕಾಪೂರ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಆಗಾಗ ಕಾಡು ಪ್ರಾಣಿಗಳು ಬಲಿಯಾಗುತ್ತಿವೆ.
ಈ ಕುರಿತು ಅರಣ್ಯ ಇಲಾಖೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ