ಅನಗತ್ಯವಾಗಿ ಪ್ರವಾದಿ ನಿಂದನೆ ಮಾಡಿದ ಟಿವಿ ನಿರೂಪಕ ಕೊನೆಗೂ ಕ್ಷಮೆ ಯಾಚಿಸಿದ
* ಟಿ.ವಿ ನಿರೂಪಕನಿಂದ ಪ್ರವಾದಿ ಅವಹೇಳನ
* ಕೊನೆಗೂ ಕ್ಷಮೆ ಯಾಚಿಸಿದ ಹನುಮಕ್ಕನವರ್
* ಕೆಟ್ಟ ಮೇಲೆ ಬುದ್ದಿ ಬಂತು ಎನ್ನುತ್ತಿದೆ ಕನ್ನಡದ ಪ್ರಸಿದ್ದ ಗಾದೆ
ಬೆಂಗಳೂರು: ಖಾಸಗಿ ಟಿವಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ನಿರೂಪಕನೊಬ್ಬ ಪ್ರೋ.ಭಗವಾನರನ್ನು ಟೀಕಿಸಲು ಹೋಗಿ ಅನಗತ್ಯವಾಗಿ ಪ್ರವಾದಿ ಮುಹಮ್ಮದ್(ಸ) ರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೂ ಕ್ಷಮೆಯಾಚಿಸಿದ್ದು ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಪ್ರೋ.ಭಗವಾನರ ಕುರಿತಂತೆ ಚರ್ಚಯೊಂದು ನಡೆದಿದ್ದು ಅದರಲ್ಲಿ ವಿಷಯಕ್ಕೆ ಸಂಬಂಧವಿರದ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿ ನಿಂದಿಸಿದ್ದನು. ಈತನ ನಿಂದನೆಯ ಬೆನ್ನ ಹಿಂದೆಯೇ ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿವಾಹಿನಿ ಹಾಗೂ ಟಿವಿ ನಿರೂಪಕನ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ಪೊಲೀಸ್ ದೂರು ದಾಖಲಾಗಿದ್ದವು.
ಈ ಹಿನ್ನೆಲೆಯಲ್ಲಿ ಮುಸ್ಲಿಮರ ಕ್ಷಮೆಯಾಚಿಸಿದ ನಿರೂಪಕ ಅಜಿತ್ ಹನುಮಕ್ಕನವರ್ ’ನಾನು ಆಡಿದ ಮಾತುಗಳಿಂದ ಯಾರಿಗಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಯಾರನ್ನೂ ನಿಂದಿಸುವ ಉದ್ದೇಶದಿಂದ ಅಡಿದ ಮಾತುಗಳಲ್ಲ ಎಂದೂ ಅವರು ಸ್ಪಷ್ಠನೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತೇ ಯಾವ ರೀತಿಯ ಚರ್ಚೆಗಳು ನಡೆಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.