ಮುಂಡಗೋಡ: ಬೈಕ್ ನಲ್ಲಿ ಬಂದು ಮಹಿಳೆಯ ಕೊರಳಿನ ಚೈನ್ ಕಿತ್ತುಕೊಂಡುಹೋದ ಘಟನೆ ಪಟ್ಟಣದ ದಲ್ಲಿ ನಡೆದಿದೆ
ಸರೋಜಾ ಸ್ವಾಮಿ ಕಲಾಲ ಎಂಬ ಮಹಿಳೆಯ ಚೈನ ಅಪಹರಿಸಿದ್ದಾರೆ ಪಟ್ಟಣದ ಟಿ.ಡಿ.ಪಿ.ರಸ್ತೆಯಲ್ಲಿ ಯಾರೋ ಕಳ್ಳರು ಬೈಕಿನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಚೈನನ್ನು ಕಿತ್ತುಕೊಂಡು ಹೋಗಿದ್ದಾರೆ.
ರವಿವಾರ ಸಂಜೆ 6 ಟಿ.ಡಿ.ಪಿ ರಸ್ತೆಯ ಡಾ|| ಛಬ್ಬಿ ಮನೆಯ ಹತ್ತಿರ ಯಾರೋ ಇಬ್ಬರು ಹೀರೋ ಹೊಂಡಾ ಬೈಕನಲ್ಲಿ ಬಂದು ದೋಚುವ ಉದ್ದೇಶದಿಂದ ನನ್ನ ಕುತ್ತಿಗೆಯಲ್ಲಿದ್ದ 5ಗ್ರಾಂ ಬಂಗಾರದ ಚೈನನ್ನು ಕಿತ್ತುಕೊಂಡು ಹೋಗಿದ್ದಾರೆಂದು ಸರೋಜಾ ಕಲಾಲ ರವಿವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.