ಕೋಲಾರ: ಬಜೆಟ್ ಮಂಡನೆಯ ಪೂರ್ವಭಾವಿ ರೈತರ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಬರಪೀಡಿತ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ನೀಡಬೇಕು ಹಾಗೂ ಕೆ,ಸಿ ವ್ಯಾಲಿ ಯೋಜನೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್ ಕೇಳಿರುವ ಸೂಕ್ತ ದಾಖಲೆಗಳನ್ನು ಒದಗಿಸಿ ತಡಯಾಜ್ಞೆಯನ್ನು ತೆರವುಗೊಳಿಸಬೇಕು ಹಾಗೂ ಸಾಲ ಮನ್ನಾದ ಬಗ್ಗೆ ಸೂಕ್ತ ನಿರ್ದಾರ ಪ್ರಕಟಿಸಬೇಕು ಹಾಗೂ ರೈತರಿಗೆ ನೋಟಿಸ್ ನೀಡುವ ಬ್ಯಾಂಕ್ಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಮತ್ತು ಸ್ವಾಮಿನಾಥನ್ ವರದಿ ಹಾಗೂ ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಬೇಕೆಂದು ನೆನ್ನೆ ವಿಧಾನ ಸೌಧದ ಮುಖ್ಯಮಂತ್ರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಮನವಿ ಮೂಲಕ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ 10 ವರ್ಷಗಳಿಂದ ಕೃಷಿಗೆ ಪೂರಕವಾಗಿ ಮಳೆ ಬಾರದೆ ರೈತ ಕಂಗಲಾಗಿದ್ದಾರೆ. ಹರಿಯುತ್ತಿದ್ದ ಕೆ.ಸಿ ವ್ಯಾಲಿ ನೀರಿಗೆ ಮಾನವೀಯತೆಯಿಲ್ಲದ ಕೆಲವರು ತಡಯಾಜ್ಞೆ ತಂದು ಬಯಲು ಸೀಮೆಯ ರೈತರ ಮರಣ ಶಾಸನ ಬರೆಯುತ್ತಿದ್ದಾರೆ. ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ಕೇಳಿರುವ ದಾಖಲೆಗಳನ್ನು ನೀಡಿ ತಡಯಾಜ್ಞೆಯನ್ನು ತೆರವುಗೊಳಿಸಿ ನೀರನ್ನು ಹರಿಸಬೇಕು ಹಾಗೂ ಈ ಬಜೆಟ್ನಲ್ಲಿ ಕೋಲಾರ ಜಿಲ್ಲೆಯನ್ನು ಸೂಕ್ಷ ಜಿಲ್ಲೆಯೆಂದು ಪರಿಗಣಿಸಿ, ವಿದರ್ಭ ಪ್ಯಾಕೇಜ್ ನೀಡಬೇಕು ಹಾಗೂ ಸರ್ಕಾರ ಮಾತ್ರ ನೂರೊಂದು ಭರವಸೆ ನೀಡಿಕೊಂಡು ರೈತರಿಗೆ ಅಂಗೈಯಲ್ಲಿ ಅರಮನೆ ತೋರಿಸುತ್ತಾ ಬ್ಯಾಂಕ್ನವರು ಸಾಲ ವಸೂಲಾತಿ ಹೆಸರಿನಲ್ಲಿ ರೈತರನ್ನು ಕೋರ್ಟ್ ಮುಖಾಂತರ ಜೈಲಿಗೆ ತಳ್ಳಲು ಮುಂದಾಗಿ ಅಮಾನಿಯವಾಗಿ ವರ್ತಿಸುತ್ತಿದ್ದರೂ ಸರ್ಕಾರಗಳು ರೈತರ ನೆರವಿಗೆ ದಾವಿಸದೇ ಇರುವುದು ನಾಚಿಕೆಗೇಡ ಸಮ್ಮೀಶ್ರ ಸರ್ಕಾರ ರಾಜ್ಯದ ರೈತರ ಮರಣಶಾಸನ ಬರೆಯುತ್ತಿದೆ. ಒಂದುಕಡೆ ಬೀಕರವಾದ ಬರಗಾಲ ಮತ್ತೊಂದು ಕಡೆ ಬೆಳೆದ ಬೆಳೆಗೆ ಬೆಲೆ ಸೀಗದೆ ಸಾಲ ತೀರಿಸಲಾಗದೆ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದರು ನೆಪ ಮಾತ್ರಕ್ಕೆ ಸಾಲ ಮನ್ನಾ ಎಂಬ ರೈತರ ಕಣ್ಣೊರಿಸುವ ತಂತ್ರಕ್ಕೆ ನೊಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸಾಲ ಮನ್ನಾ ಶೀಘ್ರ ಅನುಷ್ಠಾನಗೊಳಿಸಬೇಕು ಮತ್ತು ಕೃಷಿ ಪುನಶ್ಚೇತನಕ್ಕೆ ಕೇಂದ್ರದ ಶೇ.65 ರಷ್ಟು ರಾಜ್ಯದ ಶೇಕಡಾ 35ರಷ್ಟು ಅನುಪಾತದಲ್ಲಿ ಪ್ಯಾಕೇಜ್ ಘೋಷಿಸಬೇಕು. ಹಾಗೂ ಬೀಜ ಮತ್ತು ಕ್ರೀಮಿನಾಶಕ ಇವುಗಳ ಮೇಲೆ ಸರ್ಕಾರ ಸುಗ್ರೀವಾಘ್ಞೆ ತಂದು ರೈತನಿಗೆ ನಷ್ಟವಾಗದಂತೆ ಕ್ರಮಕ್ಕೆ ಮುಂದಾಗಿ ಜಿಲ್ಲೆಯ ರೇಷ್ಮೇ ಮತ್ತು ಮಾವು ಬೆಳೆಗಾರರ ನೆರವಿಗೆ ವೀಶೇಷ ಪ್ಯಾಕೇಜ್ ಘೋಷಿಸಿ ಜಿಲ್ಲೆಯ ಮುಖ್ಯ ಬೆಳೆಗಳಾಧ ಟೋಮೋಟೋ, ಕ್ಯಾಪ್ಸಿಕಾಂ, ಆಲೂಗಡ್ಡೆ ಇವುಗಳಿಗೆ ಬರುವ ರೋಗಗಳಿಗೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಾವು ಮತ್ತು ಹೂವಿನ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಉತ್ತಮ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಟೋಮೋಟೊ ಮಾರುಕಟ್ಟೆಯನ್ನು ಉನ್ನತ ದರ್ಜೆಗೆ ಏರಿಸಿ ಬೆಲೆ ಕುಸಿದಾಗ ಬೆಂಬಲ ಬೆಲೆ ನೀಡಿ ರೈತರ ನೆರವಿಗೆ ದಾವಿಸಬೇಕು. ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಒತ್ತು ನೀಡಿ ಕೆರೆಗಳ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಿ ರೈತರ ನೆರವಿಗೆ ಸರ್ಕಾರ ನಿಲ್ಲಬೇಕೆಂದು ಮುಖ್ಯ ಮಂತ್ರಿಗಳನ್ನು ಅಗ್ರಹಿಸಲಾಯಿತು.
ಮುಖ್ಯ ಮಂತ್ರಿಗಳು ಬಯಲು ಸೀಮೆಯ ಜಿಲ್ಲೆಯ ನಮಗೆ ವಿಶೇಷವಾದ ಕಾಳಜಿಯಿದೆ ಈ ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವ ಜೊತೆಗೆ ವಿದರ್ಭ ಪ್ಯಾಕೇಜ್ ನೀಡಿ ರೇಷ್ಮೇ ಮತ್ತು ಮಾವು ಬೆಳೆಗಾರರ ನೆರವಿಗೆ ನಿಲ್ಲಲು ಸರ್ಕಾರ ಕ್ರಿಯಾ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಕೃಷಿ ಆದಾರಿತ ಕೈಗಾರಿಕೆಗಳು ಮತ್ತು ಸಂಸ್ಕರಣ ಘಟಕಗಳನ್ನು ತೆರಯಲು ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದೇವೆಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾದ್ಯಕ್ಷ ಹುಲ್ಕುರ್ ಹರಿಕುಮಾರ್, ಉಮಾಗೌಡ, ಕೆಂಬೋಡಿ ಕೃಷ್ಣೇಗೌಡ, ನಾಗರಾಜ್, ಚಂದ್ರಪ್ಪ ಭಾಗವಹಿಸಿದ್ದರು.