ಆ.20ರಿಂದ 3 ದಿನ ಮೂರು ದಿನ ಎಸಿಬಿ ಜನಸಂಪರ್ಕ ಸಭೆ
ಕಾರವಾರ : ಉತ್ತರ ಕನ್ನಡ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕರು ಆ.20, 21 ಮತ್ತು 25ರಂದು ಮೂರು ದಿನಗಳು ಜಿಲ್ಲೆಯ ವಿವಿಧೆಡೆ ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆಗಳನ್ನು ಆಯೋಜಿಸಿದೆ.
ಆ.20ರಂದು ಬೆಳಿಗ್ಗೆ 11 ಜೋಯಿಡಾ ಪ್ರವಾಸಿ ಮಂದಿರ, ಮಧ್ಯಾಹ್ನ 4ಕ್ಕೆ ದಾಂಡೇಲಿ ಪ್ರವಾಸಿ ಮಂದಿರ, ಆ.21ರಂದು ಬೆಳಿಗ್ಗೆ 11 ಹಳಿಯಾಳ ಪ್ರವಾಸಿ ಮಂದಿರ, ಮಧ್ಯಾಹ್ನ 4 ಯಲ್ಲಾಪುರ ಪ್ರವಾಸಿ ಮಂದಿರ ಹಾಗೂ ಆ.25ರಂದು ಬೆಳಿಗ್ಗೆ 11 ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆ ನಡೆಯಲಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.