ಮುಂಡಗೋಡ : ಹಣವನ್ನು ಪಂಥಕ್ಕೆ ಕಟ್ಟಿ ಅಂದರ-ಬಾಹರ್ ಇಸ್ಪೀಟ್ ಆಡುತ್ತಿದ್ದವರನ್ನು ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಮೇತ ಇಸ್ಪಿಟ್ ಆಟಕ್ಕೆ ಬಳಸಿದ ಹಣ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಜೇನುಮುರಿ ಗ್ರಾಮದ ಹತ್ತಿರ ಗುರುವಾರ ಸಂಭವಿಸಿದೆ.
ಬಂದಿತರೆಲ್ಲರೂ ಮುಂಡಗೋಡ ಪಟ್ಟಣದ ರವಾಸಿಗಳು ಎಂದು ತಿಳಿದು ಬಂದಿದೆ. ಸುಭಾಸ ಭೋವಿ, ಮೋಹನ ಬೆಂಡಿಗೇರಿ, ಈರಪ್ಪ ಸಿಂದೋಗಿ, ಆನಂದ ಭೋವಿ, ಇಮಾಮಹುಸೇನ್ ಹಂಚಿನಮನಿ, ಮಹ್ಮದ ಬೆಂಡಿಗೇರಿ ಬಂದಿತರು. ಬಂದಿತರಿಂದ ಜುಜಾಟಕ್ಕೆ ಉಪಯೋಗಿಸಿದ 5400=00 ರೂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದ ಪೊಲೀಸರು ಜೇನುಮುರಿ ಗ್ರಾಮದ ಹತ್ತಿರದ ಸಾರ್ವಜನಿಕ ಓಡಾಡು ಸ್ಥಳದಲ್ಲಿ ಪಂಥ ಕಟ್ಟಿ ಇಸ್ಪೀಟ್ ಆಡುತ್ತಿದ್ದವರನ್ನು ಬಂದಿಸಿದ್ದಾರೆ.