ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವು
ಮುಂಡಗೋಡ : ರೈತನೋರ್ವ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾತೂರ ಪಂಚಾಯತ್ ವ್ಯಾಪ್ತಿಯ ಮುಡಸಾಲಿ ಗ್ರಾಮದಲ್ಲಿ ನಡೆದಿದೆ.
ನಿಂಗನಗೌಡ ಪಾಟೀಲ(52) ವಿಷಸೇವಿಸಿ ಮೃತಪಟ್ಟ ರೈತನಾಗಿದ್ದಾನೆ, ಸೋಸೈಟಿಯಲ್ಲಿ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸುಮಾರು 2.50ಲಕ್ಷ ಸಾಲ ಹೊಂದಿದ್ದ ಎಂದು ಹೇಳಲಾಗಿದೆ ತನ್ನ 3 ಎಕರೆ ಹೊಲದಲ್ಲಿ ಬತ್ತ ಹಾಗೂ ಗೋವಿನ ಜೋಳ ಬೆಳೆದಿದ್ದ. ಕೀಟಗಳ ಬಾದೆಯಿಂದ ಬೆಳೆ ಬರದ ಕಾರಣದಿಂದ ಚಿಂತಿತನಾಗಿದ್ದ. ಸಾಲ ತೀರಿಸುವುದು ಹೇಗೆ ಎಂದು ಮನನೊಂದಿದ್ದ ಎಂದು ಹೇಳಲಾಗುತ್ತಿದೆ. ದಿನಾಂಕ 1-1-19 ರಂದು ತನ್ನ ಹೊಲದಲ್ಲಿ ವಿಷ ಸೇವಿಸಿ ದ್ದ ಎಂದು ಹೇಳಲಾಗಿದೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆನೀಡಿ ಹುಬ್ಬಳ್ಳಿ ಕಿಮ್ಸ ಗೆ ದಾಖಲಿಸಿಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಕಾತೂರ ಗ್ರಾಮ ಪಂಚಾಯತ್ ಅಧ್ಯಕ್ಷ ಪೀರಣ್ಣಾ ಲಕ್ಮಾಪೂರ ತಿಳಿಸಿದ್ದಾರೆ. ಈ ಕುರಿತು ಗುರುವಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.