ರುದ್ರಭೂಮಿಗೆ ತ್ಯಾಜ್ಯ ಕಸ ಎಸೆಯುವವರ ವಿರುದ್ದ ಕ್ರಮಕ್ಕೆ ಆಗ್ರಹ

Source: sonews | By MV Bhatkal | Published on 5th August 2018, 12:50 PM | Coastal News |

ಭಟ್ಕಳ: ಇಲ್ಲಿನ ವೆಂಕಟಾಪುರದ ಕಾರಗದ್ದೆಯಲ್ಲಿನ ಹಿಂದು ರುಧ್ರಭೂಮಿಯ ಸ್ಥಳದಲ್ಲಿ ಕಸ ಕಡ್ಡಿ ಎಸೆದು ಅಪವಿತ್ರಗೊಳಿಸುತ್ತಿದ್ದು ಇದರಿಂದ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗುತ್ತಿದ್ದ ಹಿನ್ನೆಲೆ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಹಾಗೂ ಕಾರಗದ್ದೆ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಶನಿವಾರದಂದು ಸಲ್ಲಿಸಿದರು.

ಮನವಿಯಲ್ಲಿ ಇಲ್ಲಿನ ವೆಂಕಟಾಪುರ ಕಾರಗದ್ದೆ ಸರ್ವೇ ನಂ: 32 ಎ1ಎ ದಲ್ಲಿ ಹಿಂದು ರುಧ್ರಭೂಮಿಯಿದ್ದು, ಈ ಭಾಗದ ಹಿಂದುಗಳು ಅದನ್ನು ಉಪಯೋಗಿಸುತ್ತಾ ಬಂದಿದ್ದಾರೆ. ರುದ್ರಭುಮಿಯ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಾ ಬಂದಿರುವ ವೇಳೆ ಕಳೆದ ಕೆಲ ದಿನಗಳ ಹಿಂದೆ ರುದ್ರಭುಮಿಯನ್ನು ಅಪವಿತ್ರಗೊಳಿಸಿ ತ್ಯಾಜ್ಯವನ್ನು ಹಾಗೂ ಹೊಲಸು ಚೀಲವನ್ನು ಎಸೆದು ಹೋಗುತ್ತಿದ್ದು ಹಿಂದುಗಳಿಗೆ ತೀವ್ರ ಮುಜುಗರವಾಗುತ್ತಿದೆ. ರುದ್ರಭೂಮಿಯನ್ನು ಅಪವಿತ್ರಗೊಳಿಸುವ ಉದ್ದೇಶವಿರುದರಿಂದ ತಕ್ಷಣವೇ ಹಿಂದು ರುದ್ರಭುಮಿಯನ್ನು ಸ್ವಚ್ಛಗೊಳಿಸಿಕೊಡಬೇಕು ಮತ್ತು ಇನ್ನು ಮುಂದೆ ಕಿಡಿಗೇಡಿಗಳು ಹಿಂದು ರುಧ್ರಭೂಮಿಯನ್ನು ಅಪವಿತ್ರಗೊಳಿದಂತೆ ಕ್ರಮ ಕೈಗೊಳ್ಳುವುದರೊಂದಿಗೆ ಈ ವ್ಯಾಪ್ತಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಉದ್ದೇಶಪೂರ್ವಕವಾಗಿ ಕಸ ಕಡ್ಡಿ ಎಸೆಯುವವರ ಮೇಲೆ ಕ್ರಮ ಜರುಗಿಸಬೇಕೆಂದು ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಹಾಗೂ ಕಾರಗದ್ದೆ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪಂಚಾಯತ್ ಕ್ಲಾರ್ಕ ಮನವಿಯನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್.ಎಂ.ನಾಯ್ಕ, ಸಾರ್ವಜನಿಕರಾದ ತಿಮ್ಮಯ್ಯ ನಾಯ್ಕ ಚಂದ್ರು ನಾಯ್ಕ,ಬಾಬು ನಾಯ್ಕ , ಜಯಂತ ನಾಯ್ಕ ,ಶ್ರೀಧರ ನಾಯ್ಕ, ದೇವೆಂದ್ರ ನಾಯ್ಕ, ರಮೇಶ ನಾಯ್ಕ, ಮುಂತಾದವರು ಇದ್ದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...