ಭಟ್ಕಳ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ ಬಂದ್ಗೆ ಭಟ್ಕಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲೇ ನಿಗದಿಪಡಿಸಿದಂತೆ ಸಾರಿಗೆ ಸಂಸ್ಥೆ,ಖಾಸಗೀ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮತ್ತು ಶಾಲೆ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಪ್ರಯಾಣಿಕರು,ವಿದ್ಯಾರ್ಥಿಗಳು ಪರದಾಡುವುದು ತಪ್ಪಿತ್ತು.ಉಳಿದಂತೆ ಪಟ್ಟಣದಲ್ಲಿ ರಿಕ್ಷಾ ಹಾಗೂ ಖಾಸಗೀ ಟೆಂಪೋ,ಪ್ರವಾಸಿಗರ ವಾಹನಗಳ ಓಡಾಟ ಎಂದಿನಂತೆ ಸಾಗಿತ್ತು.ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದು ತಮ್ಮ ವ್ಯಾಪಾರ ವಹಿವಾಟು ನಡೆಸಿದವು.ಜನಜೀವನ ಸಹ ಎಂದಿನಂತೆಯೇ ಇತ್ತು.
ಪ್ರತಿಭಟನೆ : ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಬಿಸಿಯೂಟ,ಅಂಗನವಾಡಿ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂದು ಕೇಂದ್ರ ಸರ್ಕಾರದ ನೀತಿಯ ವಿರುದ್ದ ಘೋಷಣೆ ಕೂಗಿದರು.