ಶ್ರೀನಿವಾಸಪುರ: ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಮಿಂಭಾಂದವರು ಸಡಗರ ಸಂಭ್ರಮದಿಂದ ಆಚರಿಸಿದರು.
ಶ್ರೀನಿವಾಸಪುರ ಪಟ್ಟಣದ ಮಸೀದಿಗಳು ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲಾ ಮಸೀದಿಗಳಲ್ಲಿ ಬಕ್ರೀದ್ ಹಬ್ಬದ ವಿಶೇಷ ನಮಾಜು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಮೈದಾನದಲ್ಲಿ ನಡೆಸಿದ ಪ್ರಾರ್ಥನೆ ವೇಳೆ ಜಾಮಿಯಾ ಮಸೀದಿ ಇಮಾಂ ಮೌಲಾನ ಮೆಹಬರ್ ರೆಹಮಾನ್ ರವರು ಬಕ್ರೀದ್ ಹಬ್ಬದ ವಿಶೇಷ ಹಾಗು ಧಾನ ಧರ್ಮ, ಭಕ್ತಿ ಇತರರಿಗೆ ಸಹಾಯ ಮಾಡುವುದರ ಕುರಿತಂತೆ ದೈವ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮುತವಲ್ಲಿ ಜಾಹೀದ್ ಅನ್ಸಾರಿ ನೂರುಲ್ಲಾ ಖಾನ್, ಮಹಬೂಬ್ ಷರೀಪ್, ಸಯದ್ ಖಾದರ್, ಅಕ್ಬರ್ ಷರೀಪ್, ಮುತ್ತಕಪಲ್ಲಿ ಸರ್ಧಾರ್, ಯಚ್ಚನಹಳ್ಳಿ ನಿಸಾರುಲ್ಲಾಖಾನ್, ಮಹಮದ್ ಸಾಧಿಕ್, ಸತ್ತಾರ್ ಅನ್ಸಾರಿ, ಮುಜಾಹಿದ್ ಅನ್ಸಾರಿ ಇತರರು ಹಾಜರಿದ್ದರು.