ಶ್ರೀನಿವಾಸಪುರ:ಹೆಣ್ಣು ಮನೆಗೆ ಮಾತ್ರ ಸೀಮಿತವಾಗದೆ ಸಾಮಾಜಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಚೌಡಪ್ಪ ಕರೆ
ಶ್ರೀನಿವಾಸಪುರ, - ಜು - 13: ಹೆಣ್ಣು ಮನೆಗೆ ಮಾತ್ರ ಸೀಮಿತವಾಗದೆ ಸಾಮಾಜಿ ನೈತಿಕ ಮೌಲ್ಯಗಳು ಬೆಳೆಸಿಕೊಂಡು ಶಿಸ್ತನ್ನು ಮೈಗೂಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಯೋಗ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮುಖ್ಯ ಶಿಕ್ಷಕ ಕೆ.ಎಂ.ಚೌಡಪ್ಪ ತಿಳಿಸಿದರು.
ಪಟ್ಟಣದ ವಲ್ಲಬಾಯಿ ರಸ್ತೆಯಲ್ಲಿರುವ ಶ್ರೀರಾಮ ಮಂದಿರ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರಿಗೆ ಏರ್ಪಡಿಸಿದ್ದ ಮಹಿಳ ಜಾಗೃತಿ ವಿಚಾರ ಗೋಷ್ಠಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂತ್ರಜ್ಞಾನ ಬೆಳದ ಈ ಕಾಲದಲ್ಲಿ ಶಿಸ್ತು ಸಂಯಮ ತಾಳ್ಮೆ ಹೆಣ್ಣು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಹೆತ್ತವರಿಂದ ಹಿಡಿದು ಗಂಡ ಮಕ್ಕಳಿಗೆ ಹಾಗೂ ಸಮಾಜ ಮತ್ತು ಕುಟುಂಬಕ್ಕೆ ಬೆಳಕು ನೀಡುವ ತಾಯಿಯಾಗಿರಬೇಕು. ಎಲ್ಲರನ್ನು ಹೊಂದಿಸಿಕೊಂಡು ತಾಳ್ಮೆಯಿಂದ ಸಧಾ ಸಹನ ಶೀಲರಾಗಿರಬೇಕು. ಅಗತ್ಯಕ್ಕೆ ಅನುಗುಣವಾಗಿ ಆರ್ಥಿಕ ಸಹಾಯ ಬೇರೆಯವರಿಂದ ಪಡೆದರೂ ಅದನ್ನು ಸದ್ಬಳಕೆ ಮಾಡಿಕೊಂದು ಆರ್ಥಿಕ ಶೈಕ್ಷಣ ಕ ಸಾಮಾಜಿಕ ಕೌಟುಂಬಿಕ ಔದ್ಯೋಗಿಕವಾಗಿ ಭೌತಿಕ ಸ್ವಾವಲಂಬಿಗಳಾಗಿ ಸಂಸಾರÀ ನಡೆಸುವ ಆದರ್ಶ ಗೃಹಿಣ ಯಾಗಬೇಕು. ಧÀರ್ಮಸ್ಥಳ ಕ್ಷೇತ್ರ ಸಂಸ್ಥೆಯಿಂದ ಭ್ಯೂಟಿಶಿಯನ್, ಟೈಲರಿಂಗ್, ಅನೇಕ ರೀತಿಯ ಕೈ ಕಸಬುಗಳು ಇರುವಲ್ಲೆ ಹಣಗಳಿಸುವ ಗುಡಿ ಕೈಗಾರಿಕೆಗಳು ಕಲಿಸಿ ಕೊಡಲಾಗುತ್ತಿದೆ. ಇದನ್ನು ನಿರಂತರ ಕಲಿತು ಆರ್ಥಿಕ ಪ್ರಗತಿಯಾಗಿ. ಕಡಿಮೆ ಬಡ್ಡಿಗೆ ಪಡೆದ ಸಾಲ ಅಗತ್ಯ ಕೆಲಸಗಳಿಗೆ ಮಾತ್ರ ಬಳಸಿಕೊಂಡು ಆರ್ಥಿಕ ಸಾಮಾಜಿಕ ನೈತಿಕ ಮೌಲ್ಯಗಳು ಕಾಪಾಡಿ ಗುರು ಹಿರಿಯನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಧರ್ಮಸ್ಥಳ ಸಂಸ್ಥೆಯ ಸಮನ್ವಯಾಧಿಕಾರಿ ಶಾಲಿನಿ ಮಾತನಾಡಿ ಜ್ಞಾನ ವಿಕಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಕೆಲಸದಲ್ಲಿ ಬದ್ದತೆ ಇರಬೇಕು. ಹೊರಗಿನಿಂದ ಆಯಾಸವಾಗಿ ಮನೆಗೆ ಬರುವ ಯಜಮಾನರಿಗೆ ಹಿರಿಯರಿಗೆ ಮೊದಲು ಕುಡಿಯುವ ನೀರು ಕೊಟ್ಟು ಸಂಸ್ಕಾರವಂತರಾಗಿ. ಊಟ ಮಾಡುವಾಗ ವಾಹಿನಿಗಳಲ್ಲಿ ಬರುವ ಕೊಲೆಪಾತಕ ದೃಷ್ಯಗಳು ಕುಟುಂಬಗಳು ಬೇರ್ಪಡಿಸುವÀತಹ ದಾರಾವಾಹಿಗಳು ನೋಡಿಕೊಂಡು ಅನಾಗರೀಕ ಪದ್ದತಿ ಬಿಡಿ. ಅದರಿಂದ ಮಾನಸಿಕ ನೆಮ್ಮದಿ ಸಹನೆ ಮಮತೆ ವಾತ್ಸಲ್ಯ ದೂರವಾಗಿ ಕುಟುಂಬದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತೇವೆÉ. ಸಂಸ್ಥೆಗಳಿಂದ ಪಡೆವ ಸಾಲ ಸದ್ಬಳಕೆ ಮಾಡಿಕೊಂಡು ಹಣ ಅಗತ್ಯಕ್ಕೆ ತಕ್ಕಷ್ಟು ಉಪಯೋಗಿಸಿಕೊಂಡು ಆರ್ಥಿಕ ಸಬಲರಾಗಬೇಕೆಂದು ತಿಳಿಸಿದರು.
ಸ್ವಸಹಾಯ ಸಂಘದ ಹಿರಿಯ ಸದಸ್ಯೆ ಶಾಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಣ್ಣೆಂದರೆ ಸಮಾಜದ ಕಣ್ಣು ಸಾಕ್ಷರತೆಯ ಸಾರತಿ ಇದ್ದಂತೆ. ಮಹಿಳೆಯರು ಇನ್ನೊಬ್ಬರ ಬಗ್ಗೆ ಚಿಂತಿಸುವ ಬದಲು ನಮ್ಮ ಕುಟುಂಬದ ಬಗ್ಗೆ ಜ್ಞಾನ ಹರಿಸಿ ಚಿಂತಿಸಿದಾಗ ಎಲ್ಲಾ ರೀತಿಯಲ್ಲಿ ನೀವು ಸಾಪಲ್ಯಾ ಕಾಣಬಹುದೆಂದು ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ಬಾಗ್ಯಮ್ಮ, ವೆಂಕಟಲಕ್ಷ್ಮಿ ಹಾಜರಿದ್ದರು. ಗೌತಮಿ ನಿರೂಪಿಸಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.