ಶ್ರೀನಿವಾಸಪುರ, - ಜು - 19: ಕೋಲಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಗಳ್ಳತನವನ್ನು ಮಾಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿದ ಪೋಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಡಾ.ರೋಹಿಣ ಕಟೋಚ್ ರವರು ಅಭಿನಂದಿಸಿದರು.
ಬುಧವಾರ ಸಂಜೆ ಶ್ರೀನಿವಾಸಪುರ ಠಾಣೆಯ ಆವರಣದಲ್ಲಿ ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡ ಬಂದ ದ್ವಿಚಕ್ರವಾಹನಗಳಲ್ಲಿ ಒಚಿಟಿ ಮಹಿಳೆಯರ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳರಿಂದ ವಶಪಡಿಸಿಕೊಂಡ ಸರಗಳು ಮತ್ತು ಬೈಕ್ಗಳನ್ನು ಪ್ರದಶಿಸಿದ ನಂತರ ಮಾತನಾಡಿದ ಇವರು ಪ್ರಮುಖ ಆರೋಪಿ ತಜಮುಲ್ಪಾಷಾ ಎಂಬುವರು ಮುಳಬಾಗಿಲು ನಿವಾಸಿಯಾಗಿದ್ದು 2015ರಲ್ಲಿ ಇವರ ಮೇಲೆ ಕಳ್ಳತನದ ಪ್ರಕರಣಗಳು ದಾಖಲಾಗಿದೆ. 2016ರಲ್ಲಿ ಜೈಲ್ನಲ್ಲಿ ಇದ್ದ ಆರೋಪಿ 2017ರಲ್ಲಿ ಬೇಲ್ ಪಡೆದುಕೊಂಡು ಹೊರಗಡೆ ಬಂದಿದ್ದಾನೆ. ಶ್ರೀನಿವಾಸಪುರ ಕೋಲಾರ ರಸ್ತೆಯಲ್ಲಿ ಒಚಿಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ನಡೆಸಿ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾನೆ. ಮಧ್ಯವರ್ತಿ ಮುಳಬಾಗಿಲು ನಿವಾಸಿ ರಿಜ್ವಾನ್ ಮುಖಾಂತರ ಸರಗಳನ್ನು ಇತರೆ ಚಿನ್ನದ ಅಂಗಡಿಗಳಲ್ಲಿ ಸರಗಳನ್ನು ಮಾರಾಟ ಮಾಡಿರುತ್ತಾರೆ. ಪೋಲೀಸರ ತಂಡ ಈ ಸರಗಳ್ಳತನವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕೋಲಾರ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಮಾರ್ಗದರ್ಶನದಲ್ಲಿ ಮುಳಬಾಗಿಲು ಉಪವಿಭಾಗದ ಡಿವೈಎಸ್ಪಿ ಬಿ.ಕೆ.ಉಮೇಸ್ ನೇತೃತ್ವದಲ್ಲಿ ಶ್ರೀನಿವಾಸಪುರ ಸಿಪಿಐ ವೆಂಕಟರಾಮಪ್ಪ, ಕೋಲಾರ ಡಿಸಿಬಿ ವೆಂಕಟಾಚಲಪತಿ, ಶ್ರೀನಿವಾಸಪುರ ಪಿಎಸ್ಐ ಪ್ರದೀಪ್ ಸಿಂಗ್, ಸಿಬ್ಬಂದಿಗಳಾದ ಸೈಯದ್ಖಾಸಿಂ, ವೇಣುಗೋಪಾಲ್, ಗುರುಪ್ರಸಾದ್, ಮಂಜುನಾಥ, ಜಾವೀದ್, ಮುನಿವೆಂಕಟಸ್ವಾಮಿ, ಮುನಿವೆಂಕಟರೆಡ್ಡಿ, ರಮೇಶ್, ಮುರಳಿ ಮತ್ತು ಶಂಕರ್ ರವರನ್ನೊಳಗೊಂಡಂತೆ ತಂಡಗಳನ್ನು ರಚಿಸಿಕೊಂಡು ಆರೋಪಿಳ ಪತ್ತೆ ಕಾರ್ಯ ಹಚ್ಚಿದ್ದರು. ಬೈಕ್ ಗಳ ಬೆಲೆ ಸುಮಾರು 2ಲಕ್ಷ ಎಂದು ಅಂದಾಜಿಸಲಾಗಿದೆ ಮತ್ತು 180ಗ್ರಾಮ ತೂಕದ ಚಿನ್ನದ ಸರಗಳ ಬೆಲೆ 5ಲಕ್ಷ ರೂಗಳೆಂದು ಮಾಹಿತಿ ಕೊಟ್ಟರು.