ಶ್ರೀನಿವಾಸಪುರ, - ಜು - 26:ಮಾರುತಿನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ಕುಮಾರ್ ಎಸ್.ಸಿ.ಪಿ, ಟಿ.ಎಸ್.ಪಿ. ಮತ್ತು ನಗರೋತ್ಥಾನ ಫೇಸ್-3 ನಿಧಿ ಅಡಿಯಲ್ಲಿ ಸುಮಾರು 1.5ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಪುರ ಸಭೆ ಒಂದನೇ ವಾರ್ಡ್ ಸದಸ್ಯ ಶಂಕರ್ ರವರು ತಿಳಿಸಿದರು.
ಮಂಗಳವಾರ ಮಾರುತಿನಗರದಲ್ಲಿ 4ರೂಗಳ ವೆಚ್ಚದಲ್ಲಿ ಎಸ್.ಎಫ್.ಸಿ. ನಿಧಿಯಡಿಯಲ್ಲಿ ಸಿಮೆಂಟ್ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿ ಸಚಿವರ ಶ್ರಮದಿಂದ ಶ್ರೀನಿವಾಸಪುರ ಪಟ್ಟವಣವನ್ನು ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಕೋಲಾರ ಜಿಲ್ಲೆಯಲ್ಲಿಯೇ ಉತ್ತಮ ಪಟ್ಟಣವಾಗಿ ರೂಪುಗೊಳ್ಳುತ್ತಿದೆ. ಎಂ.ಜಿ.ರಸ್ತೆ ಅಗಲೀಕರಣ ಸೇರಿದಂತೆ ಹೈಟೆಕ್ ಸೌಲಭ್ಯಗಳುಳ್ಳ ನೂತನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣವನ್ನು ನಿರ್ಮಿಸಿ ಅದಕ್ಕೆ ತಕ್ಕಂತೆ ಸುಂದರವಾದ ಜೋಡಿ ರಸ್ತೆಗಳನ್ನು ನಿರ್ಮಿಸಿ ಸುಸಜ್ಜಿತ ನಗರವನ್ನಾಗಿಸಿದ್ದಾರೆ ಎಂÀದರು.
ಯಾವುದೇ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು ಮತ್ತು ಯಾವುದೇ ಕಳಪೆ ಕಾಮಗಾರಿಗೆ ಆಸ್ಪದವಿಲ್ಲದಂತೆ ಜಾಗರೂಕತೆಯಿಂದ ಆಗಿಂದಾಗ್ಗೆ ಕಾಮಗಾರಿಗಳ ಗುಣಮಟ್ಟವನ್ನು ವೀಕ್ಷಿಸಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಲ್ಲಿ ಪುರಸಭೆ ಅಧಿಕಾರಿಗಳ ಮತ್ತು ಸದಸ್ಯರ ಜವಾಬ್ದಾರಿಯನ್ನು ವಹಿಸಿಕೊಳ್ಳ ಬೇಕೆಂದು ಸಚಿವರು ನಿರ್ಧೇಶನ ನೀಡಿದ್ದಾರೆ. ಮಾರುತಿನಗರದಲ್ಲಿ ಸಾರ್ವಜನಿಕರ ಅಹವಾಲು ಪಡೆದುಕೊಂಡ ಸಚಿವರು ನನ್ನ ಜೊತೆಯಲ್ಲಿ ಚರ್ಚೆ ಮಾಡಿ ಒಂದನೇ ವಾರ್ಡಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಅಧಿಕಾರಿಗಳಿಗೆ ಆಕ್ಷನ್ ಪ್ಲಾನ್ ತಯಾರಿಸಲು ಆದೇಶಿಸಿ ಅದರಂತೆ ಸುಮಾರು 1.5ಕೋಟಿ ರೂಗಳ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷಣ ಅರುಣಾಜಗಧೀಶ್, ಮುಖ್ಯಾಧಿಕಾರಿ ಶ್ರೀಧರ್, ಉಪಾಧ್ಯಕ್ಷ ಟಿಎಂಬಿ ಮುಕ್ತಿಯಾರ್, ಪುರಸಭೆ ಸದಸ್ಯರಾದ ಬಿ.ಎಂ.ಪ್ರಕಾಶ್, ಸರ್ದಾರ್, ಯಮ್ಮನೂರ್ನಾಗರಾಜ್, ಕಾಂಗ್ರೆಸ್ ಮುಖಂಡರಾದ ಜಾಮಚೆಟ್ಲ ಶ್ರೀನಿವಾಸ್, ಗಂಗಾಧರ್, ಶಿವರಾಜ್, ಜೆಡಿಎಸ್ ಮುಖಂಡರಾದÀ ಪೂಲು ಶಿವಾರೆಡ್ಡಿ, ಗೋವಿಂದರೆಡ್ಡಿ ಇತರರು ಹಾಜರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ