ಯಲ್ದೂರು ಗ್ರಾಮ ಪಂಚಾಯ್ತಿ ಲೆಕ್ಕ ಸಹಾಯಕ ಚಲಪತಿಗೌಡರ ಮನೆ ಹಾಗೂ ಕಛೇರಿಯ ಮೇಲೆ ಲೋಕಾಯುಕ್ತ ಎ.ಸಿ.ಬಿ. ದಾಳಿ ನಡೆಸಿದರು.
ಯಲ್ದೂರು ಗ್ರಾಮ ಪಂಚಾಯ್ತಿ ಕಛೇರಿಯ ಮೇಲೆ ಚಿಕ್ಕಬಳ್ಳಾಪುರ ಎ.ಸಿ.ಬಿ. ಇನ್ಸ್ಪೆಕ್ಟರ್ ಆಂಜನಿಪ್ಪ ದಾಳಿ ನಡೆಸಿ ಚಲಪತಿಗೌಡರಿಗೆ ಸಂಬಂಧಪಟ್ಟ ಕಡತಗಳನ್ನು ಶೋಧನೆ ಮಾಡಿದರು. ಈ ಸಂದರ್ಭದಲ್ಲಿ ಎ.ಸಿ.ಬಿ. ಇನ್ಸ್ಪೆಕ್ಟರ್ ಆಂಜಿನಪ್ಪ ಮಾತನಾಡಿ, ಲೆಕ್ಕ ಸಹಾಯಕರಿಗೆ ಸಂಬಂಧಪಟ್ಟ 6 ದಾಖಲೆಗಳು ದೊರಕಿವೆ ಎಂದು ತಿಳಿಸಿದರು. ಆದಾಯಕ್ಕೂ ಮೀರಿದ ಆಸ್ತಿಯ ಶೋಧನೆಗಾಗಿ ಈ ದಾಳಿಯನ್ನು ನಡೆಸಲಾಯಿತೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿ.ಡಿ.ಓ. ವಸಂತ್ಕುಮಾರ್, ಕಾರ್ಯದರ್ಶಿ ಪಿ.ಎನ್. ಮುರಳೀಮೋಹನ್ ಹಾಗೂ ಎ.ಸಿ.ಬಿ. ಸಿಬ್ಬಂಧಿ ಹರೀಶ್ ಮತ್ತು ಶಶಿಧರ್ ಪಾಲ್ಗೊಂಡಿದ್ದರು.