ಶ್ರೀನಿವಾಸಪುರ:ಸಂಗೀತದ ಮಾರ್ಗದಲ್ಲಿ ಹರಿದುಬರುತ್ತಿರುವ ಸಾಹಿತ್ಯದ ಪ್ರಕಾರವಾದ ದಾಸ ಸಾಹಿತ್ಯ ಎಲ್ಲರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ತಾಲ್ಲೂಕು ದಾಸಸಾಹಿತ್ಯ ಪರಿಷತ್ ಅಧ್ಯಕ್ಷೆ ಮಾಯಾಬಾಲಚಂದ್ರ ಅಭಿಪ್ರಾಯಪಟ್ಟರು.
ಆರಿಕುಂಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸಸಾಹಿತ್ಯ ಅಭಿಯಾನವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಾಸರ ತತ್ವಗಳನ್ನು ಅನುಸರಿಸಿದರೆ ಶೈಕ್ಷಣ ಕ ಪ್ರಗತಿಯೊಂದಿಗೆ ಮಾನಸಿಕ ನೆಮ್ಮದಿಪಡೆಯಬಹುದು ಎಂದರು.
ಉಪನ್ಯಾಸಕಿ ಮಂಜುಳ ಪ್ರಾಸ್ತಾವಿಕವಾಗಿ ಮಾತನಾಡಿ ದಾಸಸಾಹಿತ್ಯ ಪರಿಷತ್ತು ನಡೆದುಬಂದ ಹಾದಿಯನ್ನು ವಿವರಿಸಿದರು. ಗೀತಾರಾಜ್ ದಾಸರ ಪದಗಳನ್ನು ವಿದ್ಯಾರ್ಥಿಗಳಿಗೆ ಭಜನಾ ರೂಪದಲ್ಲಿ ಹೇಳಿಕೊಟ್ಟರು. ದಾಸರ ಪದಗಳ ಗಾಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮುಖ್ಯೋಪಾದ್ಯಾಯಿನಿ ಭಾಗ್ಯಲಕ್ಷ್ಮಿ ಅವರು ದಾಸ ಸಾಹಿತ್ಯದಿಂದ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬಹುದಾದ ಮೌಲ್ಯಗಳನ್ನು ವಿವರಿಸಿದರು. ಸಮಾಜಮುಖಿ ಅಭಿಯಾನದೊಂದಿಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆಕೊಟ್ಟರು. ಶಾಲಾಶಿಕ್ಷಕರಾದ ಮುರಳಿಬಾಬು, ಶ್ರೀಧರ್ ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ