ರಾಯಚೂರು: ಜಿಲ್ಲೆಯ ಸಿಂಧನೂರಿನ ತಾಲೂಕಿನ ಮೂರು ಮೈಲ್ ಕ್ಯಾಂಪ್ ಬಳಿ ಕೆರೆಗೆ ಸ್ನಾನಕ್ಕೆ ತೆರಳಿದ್ದ ಯುವಕ ಜಲಸಮಾಧಿಯಗಿದ್ದಾನೆ.
ಸಿಂಧನೂರು ಪಟ್ಟಣದ ನಿವಾಸಿ 16 ವರ್ಷದ ಹುಸೇನ್ ಮೃತ ದುರ್ದೈವಿ. ಹುಸೇನ್ ಜೊತೆಯಲ್ಲಿ ಇನ್ನೂ ನಾಲ್ಕು ಜನ ಭಾನುವಾರ ಕೆರೆಗೆ ಸ್ನಾನ ಮಾಡಲು ತೆರಳಿದ್ದರು. ಆದರೆ ಹುಸೇನ್ ಮಾತ್ರ ಕೆರೆಯ ಮದ್ಯದ ಆಳವಾದ ಸ್ಥಳದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
ಹುಸೇನ್ ಜಲಸಮಾಧಿ ಆಗಿದ್ರೂ, ಆತನ ಗೆಳೆಯರು ಭಯದಿಂದ ಯಾರಿಗೂ ತಿಳಿಸಿರಲಿಲ್ಲ. ತಮ್ಮ ಮಗ ಕಾಣದೇ ಇದ್ದಾಗ ಹುಸೇನ್ ಪೋಷಕರು ಇಂದು ಆತನ ಗೆಳೆಯರನ್ನು ವಿಚಾರಿಸಿದಾಗ ವಿಷಯ ತಿಳಿದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಹುಸೇನ್ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.