ಶ್ರೀನಿವಾಸಪುರ: ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮಿಂಚಿನ ನೊಂದಣಿ ಎಂಬ ವಿಷೇಶ ಅಭಿಯಾನವನ್ನು 08.04.2018 ಬಾನುವಾರ ರಂದು ನಡೆಸುತ್ತಿದ್ದೇವೆ ಇದನ್ನು ತಾಲ್ಲೂಕಿನ ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ನೂತನ ತಹಸಿಲ್ದಾರ್ ರವರಾದ ಎನ್.ಎಸ್ ಪ್ರಶಾಂತ್ ರವರು ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೂತನ ತಹಸಿಲ್ದಾರ್ ರವರಾದ ಎನ್.ಎಸ್ ಪ್ರಶಾಂತ್ ರವರು ಪ್ರಜಾ ಪ್ರಭುತ್ವದಲ್ಲಿ ಮತದಾನವು ಅತ್ಯಂತ ಅಮೂಲ್ಯ ವಾದುದು ಅರ್ಹ ಮತದಾರರು ಇದರಿಂದ ವಂಚಿತರಾಗಬಾರದು ನಿಮ್ಮ ಸಮೀಪದ ಬಿ.ಎಲ್.ಓ ರವರ ಹತ್ತಿರ ನಿಮ್ಮ ಇತ್ತೀಚಿನ 2 ಬಾವಚಿತ್ರ, ಆಧಾರ್ ಕಾರ್ಡ, ವಯಸ್ಸಿನ ದೃಢೀಕರಣಪತ್ರ ನೀಡಿ ನಿಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬಹುದು ಹಾಗು ಸೇರ್ಪಡೆ,ತಿದ್ದುಪಡಿಗಳಿಗೆ ಇದೇ ತೀಂಗಳು 14 ರವರೆಗೆ ಚುನಾವಣಾ ಆಯೋಗ ಅವಕಾಶವನ್ನು ಕಲ್ಪಿಸಿದೆ, ನಮ್ಮ ತಾಲ್ಲೂಕಿನಲ್ಲಿ ಒಟ್ಟು ಮತದಾರರು 203225 ಇದರಲ್ಲಿ ಪುರುಷರು 100762 ಮಹಿಳೆಯರು 102463 ಮತ ಚಲಾಯಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚುನಾವಣೆಯ ಶಿರಸ್ತೆದಾರ್ ಕೆ.ಎನ್ ಮಂಜುನಾಥ್ ಸಿಬ್ಬಂದಿಯಾದ ಸುರೇಶ್ ಹಾಗು ಇನ್ನಿತರರು ಹಾಜರಿದ್ದರು.