ಶ್ರೀನಿವಾಸಪುರ: ಕಲಿತಿರುವುದನ್ನು ಪ್ರದರ್ಶಿಸಲು ವೇದಿಕೆಗಳು ಸಹಕಾರಿಯಾಗಿದ್ದು ಬಹುಮಾನಕ್ಕೆ ಸೀಮಿತಗೊಳ್ಳದೆ ಸ್ಪರ್ಧಾತ್ಮಕವಾಗಿ ಬಾಗವಹಿಸುವ ಜೊತೆಗೆ ಶೇ.100ರಷ್ಟು ಪಲಿತಾಂಶದ ಗುರಿ ಮುಟ್ಟಲು ವಿಧ್ಯಾರ್ಥಿಗಳು ಸತತ ಅಭ್ಯಾಸ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಷುನ್ನೀಸಾ ರವರು ತಿಳಿಸಿದರು.
ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್ನಲ್ಲಿರುವ ಶ್ರೀಸೀತಾರಾಮ ಕಲ್ಯಾಣ ಮಂಟಪದಲ್ಲಿ ಪಾವನ ಎಜುಕೇಷನ್ ಟ್ರಸ್ಟ್ನ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆಯಲು ಶಿಕ್ಷಕರು ಪೋಷಕರು ಪ್ರಯತ್ನಿಸಬೇಕಾಗಿದೆ. ಪರೀಕ್ಷೆಗಳು ಹತ್ತಿರವಾಗುತ್ತಿರುವುದರಿಂದÉೂೀದು ಬರಹದ ಕಡೆಗೆ ಗಮನ ನೀಡಿ ಗುಣಾತ್ಮಕ ಪಲಿತಾಂಶ ಬರಲು ತಾವೆಲ್ಲಾ ಶ್ರದ್ದೆವಹಿಸಬೇಕಾಗಿದೆ ಎಂದು ಕಿವಿ ಮಾತನೇಳಿದರು.
ಇಮರಕುಂಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಎನ್ ನಾಗರಾಜ್ ಮಾತನಾಡಿ ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಎಂದೂ ವ್ಯರ್ಥವಾಗುವುದಿಲ್ಲ. ಗಡಿ ಬಾಗದ ಈ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಅದೇ ರೀತಿ ಸದರಿ ಪಾವನ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿಧ್ಯಾಥಿಗಳು ಇಂದು ಉನ್ನತ ಸ್ಥಾನಗಳಲ್ಲಿ ಇದ್ದಾರೆ ಹಾಗಾಗಿ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಯಲ್ಲಿ ಅವರ ಮೇಲೆ ಗಮನವಿರಿಸಿದಾಗ ದೇಶದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಮು.ಶಿಕ್ಷಕ ಶ್ರೀನಿವಾಸರೆಡ್ಡಿ ಮಾತನಾಡಿ ಜ್ಞಾನ ದೇಗುಲಗಳಾದ ಶಾಲೆಗಳಲ್ಲಿ ವಿಧ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆ ಪಠ್ಯ ಚಟಿವಟಿಕೆಗಳಲ್ಲಿ ಕೂಡ ಆಸಕ್ತಿ ವಹಿಸಿದಾಗ ಸಮಗ್ರ ಅಭಿವೃದ್ಧಿಗೆ ಸಾಧ್ಯವಾಗುತ್ತದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ನಗದು ರಹಿತ ವ್ಯವಹಾರ ಕಾರ್ಯಾಗಾರ
ದೇಶದ ಆರ್ಥಿಕತೆಯನ್ನು ಸಮೃದ್ಧಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿನೂತನ ಯೋಜನೆಗಳಲ್ಲಿ ನಗದು ರಹಿತ ವ್ಯವಹಾರ ಭ್ರಷ್ಟಾಚಾರ ನಿರ್ಮೂಲನಕ್ಕೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುರಸಭಾ ವಲಯ ಮೇಲ್ವಿಚಾರಕ ಶೇಖರ್ಶೆಟ್ಟಿ ರವರು ತಿಳಿಸಿದರು.
ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಪುರಸಭಾ ಬಿ ವಲಯ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ನಗದು ರಹಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ ಪೇಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ಕಂಪ್ಯೂಟರ್ ಬ್ಯಾಂಕಿಂಗ್ ನಗದು ರಹಿತ ವ್ಯವಹಾರವನ್ನು ನಡೆಸಲು ಅಕ್ರಮ ಕಡಿವಾಣಕ್ಕೆ ಇದು ಉಪಯುಕ್ತವಾಗಿದೆ. ಹಾಗಾಗಿ ಏಪ್ರಿಲ್ ತಿಂಗಳಿನಿಂದ ಇದು ಜಾರಿಗೆ ಬರಲಿದ್ದು 348 ಸಂಘಗಳ ಎಲ್ಲಾ ಸದಸ್ಯರಿಗೂ ಸಹ ಈ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ನಗದು ರಹಿತ ವ್ಯವಹಾರದಿಂದ ಬೇರೆ ಬೇರೆ ಕಾರ್ಯಕ್ಷೇತ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ತಡೆಗಟ್ಟಲು ಅನುಕೂಲವಾಗಿದೆ ಆದ್ದರಿಂದ ಸಂಘದ ಸದಸ್ಯರು ನಗದು ರಹಿತ ವ್ಯವಹಾರದಲ್ಲಿ ತೊಡಗಿಸಿಕೊಳ್ಳ ಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಜಗದಾಂಬಿಕೆ, ತರಬೇತುದಾರರಾದ ಕುಮಾರಿ, ಕಲ್ಪನ ಇತರರು ಉಪಸ್ಥಿತರಿದ್ದರು.