ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕರ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಫಲಾಹೆ ಉಮ್ಮತ್ ಫೌಂಡೇಷನ್ ರವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೋಳ್ಳಾಗಿತ್ತು.
ಈ ಸಂದರ್ಭದಲ್ಲಿ ಫಲಾಹೆ ಉಮ್ಮತ್ ಫೌಂಡೆಷನ ಅಧ್ಯಕ್ಷರಾದ ಆಬೀದ್ ಅನ್ಸಾರಿ ಮತ್ತು ಉಪಾಧ್ಯಕ್ಷರಾದ ಟಿ .ಎ.ಕೆ.ಅಯಾಜ್ ಅಹ್ಮದ್ ರವರು ಮಾತನಾಡಿ ಶ್ರೀನಿವಾಸಪುರ ತಾಲೂಕಿನ ಸಾರ್ವಜನಿಕರಿಗೆ ಶಿಬಿರದಲ್ಲಿ ಹೃದಯ ತಪಾಸಣೆ, ಕಿಡ್ನಿ, ಕ್ಯಾನ್ಸರ್, ಕಣ್ಣಿನ ಪರೀಕ್ಷೆ ಹಾಗೂ ಹಲವಾರು ಕಾಯಿಲೆಗಳ ತಪಾಸಣೆ ನಡೆಸಿ ಔಷದಿಗಳು ನೀಡಿ ಅವಶ್ಯಕತೆ ಇದ್ದಲ್ಲಿ ಫಲಾಹೆ ಉಮ್ಮತ್ ಫೌಂಡೇಷನ್ ವತಿಯಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಹಾಯ ನಿಡಲಾಗುತ್ತದೆ ಎಂದರು.
ಫಲಾಯೆ ಉಮ್ಮತ್ ಫೌಂಡೇಷನ್ ನ ಕಾರ್ಯದರ್ಶಿ ಅಯಾಜ್ ಅಹಮ್ಮದ್ ಮಾತನಾಡಿ ಫೌಂಡೇಷನ್ ವತಿಯಿಂದ ಇನ್ನೂ ಹೆಚ್ಚು ಜನರಿಗೆ ಅನುಕೂಲ ಆಗುವಂತೆ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸರ್ಕಾರದಿಂದ ಬರುವ ಸವಲತ್ತುಗಳು ಬಗ್ಗೆ ಮಾಹಿತಿಯನ್ನು ನೀಡಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಆರೋಗ್ಯ ಶಿಬಿರದಲ್ಲಿ ಸುಮಾರು 250ಕು ಹೆಚ್ಚು ರೋಗಿಗಳನ್ನು ಬೆಂಗಳೂರಿನ ಸಪ್ತಗಿರಿ ಮಲ್ಟಿ ಹಾಸ್ಪಿಟಲ್ ವೈದ್ಯರು ರಿಂದ ತಪಾಸಣೆ ಮಾಡಲಾಯಿತು ಹೆಚ್ಚಿನ ರೋಗಿಗಳಲ್ಲಿ ಹೃದಯ
ಸಂಬಂಧಿಸಿದಂತೆ ಕಾಯಿಲೆ ಮತ್ತು 7 ಕ್ಯಾನ್ಸರ್ ರೋಗಿಗಳು ಬೆಂಗಳೂರಿನ ಸಪ್ತಗಿರಿ ಮಲ್ಟಿ ಆಸ್ಪತ್ರೆಯನಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸಲಹೆ ನೀಡಿದರು ಈ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಮಲ್ಟಿ ಆಸ್ಪತ್ರೆಯ ವೈದ್ಯರು ಭಾಗ ವಹಿಸಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಸತ್ತಗಿರಿ ಆಸ್ಪತ್ರೆಗೆ ಬರಲು ಸೂಚನೆ ನೀಡಿದ್ದು ರೋಗಿಗಳು ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಮೀಯಾ ಮಸೀದಿ ಅಧ್ಯಕ್ಷ ಝಹೀದ್ ಅನ್ಸಾರಿ, ಮಶ್ಕೂರ್ ಮಾವಿನ ಮಂಡಿ ಮಾಲೀಕ ಮುಸ್ತಫಾ ಶರೀಫ್, ಫಲಾಹ್ ಉಮ್ಮತ್ ಫೌಂಡೇಷನ್ ಎಂ.ಬಿ ಟಿ ಟ್ರೇಡರ್ಸ್ ಮಾಲೀಕ ಸಾದಿಕ್ ಪಾಷಾ, ನಜೀರ್ ಖಾನ್, ಮುಜೀರ್ ಅಹ್ಮದ್, ರಾಜಾ, ಶಬ್ಬೀರ್, ಪದಾಧಿಕಾರಿಗಳು ಹಾಗೂ ಶ್ರೀನಿವಾಸಪುರ ಪಟ್ಟಣದ ಮುಸ್ಲಿಂ ಯುವಕರು ಭಾಗವಹಿಸಿದ್ದರು.
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ