ಶ್ರೀನಿವಾಸಪುರದಲ್ಲಿ ಎಸಿಬಿ ದಾಳಿ ; ಬಲೆಗೆ ಬಿದ್ದ ಬೆಸ್ಕಾಂ ಜೆ.ಇ
ಶ್ರೀನಿವಾಸಪುರ: ಬೆಸ್ಕಾಂ ಶಾಖೆ ಜೂನಿಯರ್ ಇಂಜನಿಯರ್ ರಾಮಚಂದ್ರಪ್ಪ ಎಂಬುವವರು ಲಂಚ ಪಡೆಯುವಾಗ ಎ.ಸಿ.ಬಿ ಬಲೆಗೆ ಬಿದ್ದ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಗೌವನಪಲ್ಲಿ ಎಂಬಲ್ಲಿ ನಡೆದಿದೆ.
ಬಾಬಾಜಾನ್ ಎಂಬುವರಿಗೆ ಜೂನಿಯರ್ ಇಂಜನಿಯರ್ ರಾಮಚಂದ್ರಪ್ ರೂ ಹತ್ತು ಸಾವಿರ ಬೇಡಿಕೆ ಇಟ್ಟಿದ್ದು ಅದರಲ್ಲಿ ಎಂಟು ಸಾವಿರ ರೂಗಳನ್ನು ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದರು.
11 KV ವಿದ್ಯುತ್ ಲೈನ್ ಬದಲಾವಣೆಗಾಗಿ ಹತ್ತು ಸಾವಿರ ರು ಬೇಡಿಕೆ ಇಟ್ಟಿದ್ದರು ಎಂದು ಬಾಬಾ ಜಾನ್ ಎಂಬುವರು ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಎ.ಸಿ.ಬಿ ಅಧಿಕಾರಿಗಳು ಜೂನಿಯರ್ ಇಂಜಿನಿಯರ್ ರಾಮಚಂದ್ರಪ್ಪ ಅವರನ್ನು ವಶಕ್ಕೆ ಪಡೆದುಕೊಂಡ ವಿಚಾರಣೆ ನಡೆಸಿದ್ದರು ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ವರದಿ ಶಬ್ಬೀರ್ ಅಹಮ್ಮದ್