ಶ್ರೀನಿವಾಸಪುರ: ತಾಲ್ಲೂಕಿನ ತೂಪಲ್ಲಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ರೈತರಿಗೆ ಉಪಕಾರ ಮಾಡಿಲ್ಲ ರೈತ ಸಮುದಾಯದ ನಿಜವಾದ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಹೇಳಿದರು.
ರೈತರು ಸತತ ಬರಗಾಲದಿಂದ ಬೇಸೆತ್ತಿದ್ದಾರೆ ಸಾಲದ ಹೊರೆಯನ್ನು ಸಹಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಪರಿಸ್ಥಿತಿ ಹೀಗಿದ್ದರೂ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಬಜೆಟ್ನಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತ ಉಂಟಾದಾಗ ಬೆಂಬಲ ಬೆಲೆ ಕೊಡುವುದಾಗಿ ಘೋಷಿಸಿದೆ. ಆದರೆ ಅದರ ವೈಜ್ಞಾನಿಕ ನಿಲುವು ಪ್ರಕಟವಾಗಿಲ್ಲ. ಬೇಗ ಕೊಳೆಯುವ ಪದಾರ್ಥಗಳು ದಾಸ್ತಾನು ಮಾಡಲು ಸಿದ್ದವಾಗುವಂತಹ ಪದಾರ್ಥಗಳ ಬೆಂಬಲ ಬೆಲೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಧರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಾನು ಪ್ರಧಾನಿಯಾಗಿದ್ದಾಗ 6 ಗಂಟೆಗೆ ಆಗುವುದಾದ ಬೆಂಬಲ ಬೆಲೆ ನಿಗಧಿ ಮಾಡಿದ್ದೆ ಹಾಗೆಯೇ ಉಳಿದ ಪದಾರ್ಥಗಳಿಗೂ ರೈತರ ದುಡಿಮೆಗೆ ಮೋಸವಾಗದಂತೆ ಬೆಂಬಲ ಬೆಲೆ ನೀಡಿದ್ದೆ. ಆ ಮಾನದಂಡವನ್ನು ಇಂದಿನ ಸರ್ಕಾರ ಪಾಲಿಸುತ್ತಿಲ್ಲ. ಇದರಿಂದ ರೈತ ನಿಜವಾದ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ರೈತ ಘಾಸಿ ಗೊಂಡರೆ ಕೃಷಿ ಉತ್ಪಾದನೆ ಕುಂಟಿತಗೊಳ್ಳುತ್ತದೆ ಎಂದು ಹೇಳಿದರು.
ದೇಶದಲ್ಲಿ ರೈತ ಆತ್ಮಹತ್ಯೆ ನಿಲ್ಲಿಸಬೇಕು ಮಣ್ಣಿನ ಮಕ್ಕಳು ಸುಗುಮವಾಗಬೇಕು ಅದಕ್ಕೆ ಸರ್ಕಾರ ಪೂರಕವಾದ ನೀತಿಯನ್ನು ರೂಪಿಸಿ ಜಾರಿಗೆ ತರಬೇಕು ರೈತ ಸಮುದಾಯ ನೆಮ್ಮದಿ ಹಾಳು ಮಾಡಿರುವ ಸಾಲದ ಶೂಲದಿಂದ ಅವರನ್ನು ಪಾರು ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ತೂಪಲ್ಲಿ ಆರ್.ಚೌಡರೆಡ್ಡಿ, ಮನೋಹರ್, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾರಾಯಣಸ್ವಾಮಿ, ಟಿ.ರಾಮಯ್ಯ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ, ಮುಖಂಡರಾದ ಶ್ರೀನಿವಾಸರೆಡ್ಡಿ, ಶ್ರೀನಿವಾಸಪ್ಪ ಪೂಲು ಶಿವಾರೆಡ್ಡಿ, ಲಕ್ಷ್ಮಣ್ರೆಡ್ಡಿ, ನಾಗೇಶ್ರೆಡ್ಡಿ ಮತ್ತಿತರರು ಹಾಜರಿದ್ದರು.