ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾ.ಪಂ.ನೌಕರರಿಂದ ಪ್ರತಿಭಟನೆ

Source: sonews | By Staff Correspondent | Published on 20th June 2018, 8:10 PM | State News | Don't Miss |

ಶ್ರೀನಿವಾಸಪುರ: ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ 51,114 ಮಂದಿ ನೌಕರರನ್ನು ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರಿಸಿ ವೇತನ ನೀಡುವಂತೆ ಸೇರಿದಂತೆ 6 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ  ತಾಲ್ಲೂಕು ಗ್ರಾಮ ಪಂಚಾಯ್ತಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ನೌಕರರು ತಾಲ್ಲೂಕು ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು.
     

ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಶಂಕರಪ್ಪ ರವರು ಮಾತನಾಡಿ ಗ್ರಾಮ ಪಂಚಾಯ್ತಿ ನೌಕರರಿಗೆ ಮಾಸಿಕ ಸಂಬಳ ಸಿಗದೇ ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇತನ ಜಾರಿಯಾಗದೇ ಬಹಳ ಕಷ್ಟದಲ್ಲಿ ಇರುವಂತಹ ಅಂತಹ ಗ್ರಾಮ ಪಂಚಾಯ್ತಿಯ 51,114 ಮಂದಿ ನೌಕರರಿಗೆ ಸರ್ಕಾರದಿಂದ ಇಎಪ್‍ಎಂಎಸ್ ಮೂಲಕ ವೇತನ ಕೊಡಿಸಲು ಆದೇಶ ಹೊರಡಿಸಿರುವುದು ಜೊತೆಗೆ ಶೇ65 ಮಂದಿ ನೌಕರರನ್ನು ಪಂಚತಂತ್ರಾಂಶದಲ್ಲಿ ಸೇರ್ಪಡೆ ಮಾಡಿರುವುದಕ್ಕೆ ಈ ಮೂಲಕ ಸರ್ಕಾರಕ್ಕೆ ಸಂಘ ಚಿರುಋಣಿಯಾಗಿದೆ ಎಂದರು. ಇದೇ ಜೂನ್ 5ರಂದು ನಡೆದ ವಿಡಿಯೋ ಸಂವಾದದಲ್ಲಿ ಪೂರ್ಣಪ್ರಮಾಣದ ಅನುಮೋದನೆ, ಬೇಕಾದಂತಹ ವಿಧ್ಯಾರ್ಹತೆ, ಮಂಜೂರಾದ ಹುದ್ದೆ ಇತ್ಯಾದಿಗಳು ಇದ್ದರೆ ಮಾತ್ರ ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರಿಸಬೇಕೆಂಬ ನಿರ್ಧೇಶನದಿಂದ 17 ಸಾವಿರ ಮಂದಿ ನೌಕರರು ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರ್ಪಡೆಯಾಗದೇ ಉಳಿದಿದ್ದಾರೆ ಎಂದು ಅಸಮದಾನ ತೋಡಿಕೊಂಡರು.  ಇದರಲ್ಲಿ ಸ್ವಚ್ಚತಾಗಾರರು, ನಾಲೆ ಸ್ವಚ್ಚ ಮಾಡುವವರು ಇದ್ದಾರೆ. ಹೀಗೆ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹತ್ತಾರು ವರ್ಷಗಳಿಂದ ಕನಿಷ್ಟ ವೇತನವಿಲ್ಲದೇ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮ ಪಂಚಾಯ್ತಿ ನೌಕರರಿಗೆ ಸಂಬಂದಿಸಿ 6 ಕಡತಗಳು ವಿವಿದ ಹಂತಗಳಲ್ಲಿ ಒಂದು ವರ್ಷದಿಂದ ಸರ್ಕಾರದ ಮುಂದೆ ಇದೆ ಕೂಡಲೇ ಇವುಗಳಿಗೆ ಮಂಜೂರಾತಿ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಡಿ.ಈಶ್ವರಪ್ಪ, ಖಜಾಂಚಿ ಎಂ.ಶ್ರೀನಿವಾಸ, ಆವಲಕುಪ್ಪ ಶ್ರೀನಿವಾಸ್, ಯಲ್ದೂರು ಅಮರನಾಥ, ಶಿವಣ್ಣ, ಲಕ್ಷ್ಮೀಪುರ ನಾಗಪ್ಪ, ಹೊದಲಿ ವೆಂಕಟರವಣಪ್ಪ, ತಾಡಿಗೋಳ್ ಗೋವಿಂದಪ್ಪ, ಪುಲಗೂರಕೋಟೆ ನಾಗಪ್ಪ ಆಂಜಪ್ಪ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...