ಹಾಲು ಕರೆಯುವ ಯಂತ್ರಗಳ ಸದ್ಬಳಕೆಗೆ  ಕೆ.ಎಂ.ಎಫ್. ನಿರ್ದೇಶಕ ಬೈರೆಡ್ಡಿ  ಕರೆ

Source: sonews | By Staff Correspondent | Published on 8th July 2018, 8:12 PM | State News |

ಶ್ರೀನಿವಾಸಪುರ: ಹಾಲು ಉತ್ಪಾದಕರು ಹಾಲು ಕರೆಯುವ ಯಂತ್ರಗಳ ಸದ್ಬಳಕೆಯನ್ನು ಉಪಯೋಗಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೆಕೆಂದು ಕೆ.ಎಂ.ಎಫ್. ನಿರ್ದೇಶಕ ಬೈರೆಡ್ಡಿ ತಿಳಿಸಿದ್ದಾರೆ. 

ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯ ಶ್ಯಾಗತ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಕರೆಯುವ  ಯಂತ್ರಗಳನ್ನು ವಿತರಿಸಿ ಮಾತನಾಡಿದ ಕೆ.ಎಂ.ಎಫ್. ನಿರ್ದೇಶಕ, ಈ ಯಂತ್ರಗಳಲ್ಲಿ ಒಂದು ಬಾರಿಗೆ 6 ಹಸುಗಳಿಂದ  ಹಾಲು ಕರೆಯುವದರಿಂದ ಉತ್ಪಾದಕರಿಗೆ ಸಮಯದ ಉಳಿತಾಯ, ಗುಣಮಟ್ಟದ ಹಾಲು, ರಾಸುಗಳಿಗೆ ಆರೋಗ್ಯ ಹಿತವಾಗಿದ್ದು, ಒಂದೇ ಅವಧಿಯ ಮಿತ  ಸಮಯದಲ್ಲಿ ಹಾಲನ್ನು ಕರೆಯಬಹುದು, ಈ ಸದಾವಕಾಶವನ್ನು ಪ್ರತಿಯೊಬ್ಬ ಉತ್ಪಾದಕರು ಸದ್ಬಳಕೆ ಮಾಡಿಕೊಡಬೇಕೆಂದರು. 

ಡಿ.ಎಂ. ಶಿವರಾಜ್ ಮಾತನಾಡಿ ಕೋಚಿಮುಲ್ ಸಂಸ್ಥೆಯಿಂದ ಈ ಸಂಘಕ್ಕೆ ಹಾಲು ಕರೆಯುವ ಯಂತ್ರಗಳಿಗಾಗಿ ಸುಮಾರು 4 ಲಕ್ಷರೂಗಳ ಮೊತ್ತ, ಸ್ಥಳೀಯ ಸಂಘದಿಂದ 1 ಲಕ್ಷ ಪಡೆದು, ಒಟ್ಟು 5 ಲಕ್ಷ ರೂಗಳ ವೆಚ್ಚದಲ್ಲಿ ಸಾಮೂಹಿಕ ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಗಿದ್ದು, ಇವುಗಳ ಸದ್ಬಳಕೆಯನ್ನು ಸಂಘದ ಆಡಳಿತ ಮಂಡಲಿಯವರು ಉತ್ಪಾದಕರಿಗೆ ನೆರವಾಗುವ ನಿಟ್ಟಿನಲ್ಲಿ ಉಪಯೋಗವಾಗುವಂತೆ ಅನುವು ಮಾಡಿಕೊಡಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಡಿ.ಎಂ. ಗುರಪ್ಪ, ಡಾ. ರಾಘವನ್, ಶ್ರೀನಿವಾಸ್ ಎಸ್.ವಿ. ಕೃಷ್ಣೇಗೌಡ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ವಿ. ಸುಧಾಕರ್, ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.  

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...