ಶಿರೂರು: ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಸರಕಾರಿ ಬಸ್ಸಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಘಟನೆ ಶಿರೂರು ನೀರ್ಗದ್ದೆ ಬಳಿ ನಡೆದಿದೆ.ಕುಂದಾಪುರದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕ.ರಾ.ರ.ಸಾ.ಸಂಸ್ಥೆಗೆ ಸೇರಿದ ಬಸ್ಸು ನೀರ್ಗದ್ದೆ ಬಳಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿತ್ತು.ಈ ಸಂಧರ್ಭದಲ್ಲಿ ವೇಗದಿಂದ ಬಂದ ಕೇರಳ ಮೂಲದ ಲಾರಿ ಡಿಕ್ಕಿ ಹೊಡೆಯಿತು.
ಡಿಕ್ಕಿಯ ರಭಸಕ್ಕೆ ಬಸ್ಸಿನ ಹಿಂಭಾಗ ಸಂಪೂರ್ಣ ನಜ್ಜುನಜ್ಜಾಗಿದೆ.ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರೆ.ಬ್ಯೆಂದೂರು ಆಸ್ಪತ್ರೆಗೆ ಸಾಗಿಸಲಾಗಿದೆ.ಬ್ಯೆಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.