ಶಿಡ್ಲಘಟ್ಟ:ವಿದ್ಯಾರ್ಥಿಗಳಲ್ಲಿ ಶಿಸ್ತು ರಾಷ್ಟ್ರೀಯ ಭಾವನೆ ಮೂಡಿಸುತ್ತಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಸೇವೆ ಶ್ಲಾಘನೀಯ : ಬಿಇಓ ಎಸ್.ರಘುನಾಥ್ರೆಡ್ಡಿ ಪ್ರಶಂಸೆ
ಶಿಡ್ಲಘಟ್ಟ,ಫೆಬ್ರವರಿ22: ಮಕ್ಕಳಲ್ಲಿ ರಾಷ್ಟ್ರೀಯಭಾವನೆ,ಸೇವೆ ಮತ್ತು ಶಿಸ್ತು ಬೆಳೆಸುವುದರಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಶ್ರಮಿಸುತ್ತಿದೆ ಎಂದು ಬಿಇಓ ಎಸ್.ರಘುನಾಥ್ರೆಡ್ಡಿ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ 45 ಮಂದಿ ಶಿಕ್ಷಕರು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ನ ತರಬೇತಿ ಹೊಂದಿದ್ದು 10-12 ಶಾಲೆಗಳಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ನ ಶಾಖೆಗಳನ್ನು ತೆರೆಯಲಾಗಿದ್ದು ಇನ್ನೂಳಿದ ಶಾಲೆಗಳಲ್ಲಿ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದೆಂದರು.
ಇದೇ ಸಂದರ್ಭದಲ್ಲಿ ಸರ್ವಧರ್ಮಗಳ ಗ್ರಂಥಗಳ ಪಠಣ ಮತ್ತು ಪ್ರಾರ್ಥನೆಯನ್ನು ಮಾಡಲಾಯಿತು ಕಾರ್ಯಕ್ರಮದಲ್ಲಿ ತಾಲೂಕಿನ ದೇವರಮಳ್ಳೂರು ಶಾಲೆಯ ಮಕ್ಕಳು,ಕೊತ್ತನೂರಿನ ಬುಲಬುಲ್ಗಳು ಹಾಗೂ ಸರಸ್ವತಿ ಕಾನ್ವೆಂಟ್ ಮತ್ತು ಶಾರದಾ ಪ್ರೌಢಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ಗಳು ಭಾಗವಹಿಸಿದರು.
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತೆ ಸೀತಾಲಕ್ಷ್ಮೀ,ಜಿಲ್ಲಾ ಕಾರ್ಯದರ್ಶಿ ಮನೋಹರ್,ಜಿಲ್ಲಾ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್,ಎ.ಎಸ್.ವಿ.ಸಿ ಶಂಕರ್,ಟಿ.ಪಿ.ಇ.ಓ ರಂಗನಾಥ್,ಹೇಮಕುಮಾರಿ,ಸ್ಥಾನಿಕ ಆಯುಕ್ತ ಲಕ್ಷ್ಮೀನಾರಾಯಣಗುಪ್ತ,ಶಿಕ್ಷಕರಾದ ಟಿ.ನಾರಾಯಣಸ್ವಾಮಿ(ಪಟೇಲ್),ಸಾವಿತ್ರಮ್ಮ,ಉಷಾ,ವಿಶಾಲಾಕ್ಷೀ,ನಾಗರಾಜು,ಮಾರುತಿ ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.