ಶಿಡ್ಲಘಟ್ಟ,ಜುಲೈ29: ನಗರದ ವಿವಿಧಡೆ ದಾಳಿ ನಡೆಸಿದ ನಗರಸಭೆ ಆಧಿಕಾರಿಗಳು 4 ಕ್ವಿಂಟಾಲ್ನಷ್ಟು ಪ್ಲಾಸ್ಟಿಕ್ ವಶ ಪಡಿಸಿಕೊಂಡಿದ್ದು 17 ಸಾವಿರ ರೂಪಾಯಿಗಳ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ನೇತೃತ್ವದಲ್ಲಿ ಪರಿಸರ, ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಯು ದಿಡೀರ್ ದಾಳಿ ನಡೆಸಿ ನಾಲ್ಕು ಕ್ವಿಂಟಾಲ್ನಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು 17 ಸಾವಿರ ರೂಪಾಯಿಗಳ ದಂಡ ವಿಧಿಸಿದರು.
ನಗರದ ಪ್ರವಾಸಿ ಮಂದಿರ ರಸ್ತೆ, ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ಬೇಕರಿ, ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪ್ಲಾಸ್ಟಿಕ್ ಕವರ್ ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ನ್ನು ವಶಪಡಿಸಿಕೊಂಡರು ಮಳಿಗೆಗಳಲ್ಲಿ ಪ್ಲಾಸ್ಟಿಕ್ ದಾಸ್ತಾನು ಮಾಡಿದ್ದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಿದ್ದೇ ಆದಲ್ಲಿ ಪರವಾನಗಿಯನ್ನು ರದ್ದುಪಡಿಸುವ ಎಚ್ಚರಿಕೆ ನೀಡಿದರು.
ಕೆಲ ಅಂಗಡಿ, ಬೇಕರಿ ಮಾಲೀಕರು ಪ್ಲಾಸ್ಟಿಕ್ ಮಾರಾಟ ಮಾಡಬಾರದು ಅಂತ ನಮಗೆ ಗೊತ್ತಿಲ್ಲ ನಾವು ಪ್ಲಾಸ್ಟಿಕ್ ಕವರ್ಗಳಷ್ಟೆ ಮಾರಾಟ ಮಾಡುತ್ತಿದ್ದೇವೆ, ಈ ಬಾರಿ ಬಿಡಿ ಮುಂದಿನ ಬಾರಿ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳನ್ನು ಕೇಳಿಕೊಂಡು ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ನೋಡಿದರು ಆದರೆ ಯಾವುದೆ ಮುಲಾಜು ನೋಡದ ಅಧಿಕಾರಿಗಳು ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿ ಮುಂದೆ ಮಾರಾಟ ಮಾಡಿದ್ದೇ ಆದಲ್ಲಿ ವ್ಯಾಪಾರ ವಹಿವಾಟಿನ ಪರವಾನಗಿಯನ್ನೆ ರದ್ದುಪಡಿಸುವ ಎಚ್ಚರಿಕೆ ನೀಡಿದರು.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸಯೀದಾ, ಆಂಜಿನಪ್ಪ, ರಾಜಸ್ವ ನಿರೀಕ್ಷಕ ಮಧು,ಅಪ್ಪಿ,ನೀರು ಸರಬರಾಜು ವಿಭಾಗದ ಮುರಳಿ ಇನ್ನಿತರೆ ನಗರಸಭೆಯ ಆಧಿಕಾರಿ, ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.