ಶಿಡ್ಲಘಟ್ಟ,ಆಗಸ್ಟ್24: ರಾಸಾಯನಿಕ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ನಗರಸಭೆಯ ಪೌರಾಯುಕ್ತ ಮತ್ತು ನಗರ ಪೋಲಿಸರು ವಿವಿಧಡೆ ದಾಳಿ ನಡೆಸಿ 4 ನಿಷೇಧಿತ ಗಣೇಶ್ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರಸಭೆಯ ಪೌರಾಯುಕ್ತ ಜಿ.ಎನ್.ಚಲಪತಿ ಹಾಗೂ ನಗರ ಪೋಲಿಸ್ಠಾಣೆಯ ಪಿಎಸ್ಐ ನವೀನ್ ನೇತೃತ್ವದಲ್ಲಿ ದಾಳಿ ನಡೆಸಿ ರಾಸಾಯನಿಕ ಮಿಶ್ರಿತ ಗಣೇಶ್ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ 4 ಗಣೇಶ್ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಸಾಯನಿಕ ಮಿಶ್ರಿತ ಗಣೇಶ್ ಮೂರ್ತಿಗಳು ಪರಿಸರಕ್ಕೆ ಮಾರಕವಾಗಿದ್ದು ಯಾರಾದರೂ ಅದನ್ನು ಮಾರಾಟ ಮಾಡಿದ್ದ ಪಕ್ಷದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಇದೇ ವೇಳೆಯಲ್ಲಿ ಕೆಲವರು ಸಾರ್ ಮಣ ್ಣನಲ್ಲಿ ತಯಾರಿಸಿದ ಗಣೇಶ್ ಮೂರ್ತಿಗಳು ಸಾರ್ ಯಾವುದೇ ರೀತಿಯ ರಾಸಾಯನಿಕ ಮಿಶ್ರಣ ಮಾಡಿಲ್ಲವೆಂದು ವಾದ ಮಾಡಿದರು ಕೊನೆಗೂ ಪರಿಶೀಲನೆ ನಡೆಸಿದ ಅಧಿಕಾರಿಗಳು ಪಿಓಪಿ ಗಣೇಶ್ ಮೂರ್ತಿಗಳನ್ನು ವಶಪಡಿಸಿಕೊಂಡರು.