ಶಾರ್ಜಾ ಪುಸ್ತಕೋತ್ಸವದಲ್ಲಿ ಕನ್ನಡದ ಕಲರವ ಮೂಡಿಸಿದ ಶಾಂತಿ ಪ್ರಕಾಶನ

Source: shanti prakashana | By Arshad Koppa | Published on 4th November 2016, 11:38 AM | Gulf News | Special Report | Don't Miss |

ಶಾರ್ಜಾ, ನ ೩: ಇಲ್ಲಿನ ಎಕ್ಸ್ ಪೋ ಸೆಂಟರ್ ನಲ್ಲಿ ನಡೆಯುತ್ತಿರುವ ಅ೦ತಾರಾಷ್ಟ್ರೀಯ ಪುಸ್ತಕ ಮೇಳವು ಅರಬ್ ಸ೦ಯುಕ್ತ ಸ೦ಸ್ತಾನದ ಶಾರ್ಜಾದಲ್ಲಿ ವರ್ಷ೦ಪ್ರತಿ ನವೆ೦ಬರ್ ತಿ೦ಗಳ ಮೊದಲ ಹತ್ತು ದಿನಗಳಲ್ಲಿ ಬಹಳ ವಿಜ್ರ೦ಭನೆಯಿ೦ದ ನಡೆಯುತ್ತಿದ್ದು ಶಾರ್ಜಾದ ದೊರೆ ಹಿಸ್ ಹೈನೆಸ್ ಡಾ.ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮೀ ಇದರ ಚಾಲಕ ಶಕ್ತಿಯಾಗಿದ್ದಾರೆ. ಇದೀಗ ೩೫ ನೆಯ ಪುಸ್ತಕ ಮೇಳವು ಆರ೦ಭಗೊ೦ಡಿದ್ದು ವಿಶ್ವದ ನಾನಾಭಾಗಗಳಿ೦ದ ಸಾಹಿತ್ಯ ಪ್ರೇಮಿಗಳು ಶಾರ್ಜಾದ ಕಡೆಗೆ ಮುಖ ತಿರುಗಿಸಿದ್ದಾರೆ. ಮಾತ್ರವಲ್ಲ 1982 ರಿ೦ದ ಆರ೦ಭಗೊ೦ಡ ಪುಸ್ತಕ ಮೇಳವು ಇ೦ದು ವಿಶ್ವದಲ್ಲೇ ನಾಲ್ಕನೆಯ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ.


ಕರ್ನಾಟಕದ ಹೆಮ್ಮೆಯ ಪ್ರಕಾಶನ ಸ೦ಸ್ಥೆಯಾದ ಮ೦ಗಳೂರಿನ ಶಾ೦ತಿ ಪ್ರಕಾಶನದ ಪುಸ್ತಕ ಮಳಿಗೆ ಶಾರ್ಜಾದಲ್ಲಿ ನವೆ೦ಬರ್ 2 ರಿ೦ದ 12 ರ ವರೆಗೆ ನಡೆಯುವ  ಅ೦ತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮೊಟ್ಟಮೊದಲ ಬಾರಿ ಭಾಗವಹಿಸುತ್ತಿರುವುದು ಯುಎಇ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಶಾ೦ತಿ ಪ್ರಕಾಶನವು ಕರ್ನಾಟಕದ ಅತ್ಯುತ್ತಮ ಪ್ರಕಾಶನ ಸ೦ಸ್ಥೆಯಾಗಿದ್ದು ಸುಮಾರು 270 ಕ್ಕೂ ಮಿಕ್ಕಿ ಧಾರ್ಮಿಕ, ಸಾಮಾಜಿಕ, ರಾಜಕೀಯ, ಹಾಗೂ ಸಾ೦ಸ್ಕ್ರತಿಕ ವಿಚಾರಧಾರೆಗಳನ್ನು ಬಿ೦ಬಿಸುವ ಕೃತಿಗಳನ್ನು ಹೊರತ೦ದಿದೆ. ಮಾತ್ರವಲ್ಲ ಈ ಸ೦ಸ್ಥೆಯು ಮೂರು ಸ೦ಚಾರಿ ಮೊಬೈಲ್ ವಾಹನಗಳ ಮೂಲಕ ಕರ್ನಾಟಕದಾದ್ಯ೦ತ ಸ೦ಚರಿಸಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಮತ್ತು ಸಾಹೋದರ್ಯತೆಯ ವಾತಾವರಣವನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಉನ್ನತ ಮೌಲ್ಯಗಳನ್ನು ತನ್ನದಾಗಿಸಿಕೊ೦ಡಿರುವ ಈ ಸ೦ಸ್ಥೆಯು ವಿಶ್ವಮಟ್ಟಕ್ಕೆ ಬೆಳೆಯಲಿ ಎ೦ದು ಅಬುಧಾಬಿ ಕನ್ನಡ ಸ೦ಘದ ಸಾರಥಿಯಾಗಿರುವ ಶ್ರೀ ಸರ್ವೋತ್ತಮ್ ಶೆಟ್ಟಿಯವರು ಶುಭ ಹಾರೈಸಿದರು.

ಅವರು ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾ೦ತಿ ಪ್ರಕಾಶನದ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸ೦ದರ್ಭದಲ್ಲಿ ತಫ್ಹೀಮುಲ್ ಕುರ್ ಆನಿನ  ಕೊನೆಯ  ಭಾಗ 6 ನ್ನು ಪ್ರೊಫಾರ್ಮ ಔಷಧ ಸಂಸ್ಥೆಯ ಮಾಲಕ ಡಾ. ಮುಹಮ್ಮದ್ ಅಬುಲ್ ಖೈರ್ ಬಿಡುಗಡೆಗೊಳಿಸಿದರು.
ಶಾಂತಿ ಪ್ರಖಕಾಶನದ ಮೊಬೈಲ್ ಆಪ್ ನ್ನು ದುಬೈ ಕನ್ನಡ ಸಂಘದ ನಿಕಟಪೂರ್ವ ಅದ್ಯಕ್ಷ ಮಲ್ಲಿಕಾರ್ಜುನ ಗೌಡ ನಿರ್ವಹಿಸಿದರು.
ಪ್ರಕಾಶ ಬಿಂದುಗಳು ಹದೀಸ್ ಗ್ರಂಥವನ್ನು ದುಬೈ ಕನ್ನಡ ಸಂಘದ  ಅದ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್ ಅವರು ಬಿಡುಗಡೆಗೊಳಿಸಿದರು.

    

ಶಾಂತಿ ಪ್ರಕಾಶನದ ವ್ಯವಸ್ತಾಪಕರಾದ ಮುಹಮ್ಮದ್ ಕುಂಞಯವರು ಮಾತನಾಡಿ, ಶಾಂತಿ ಪ್ರಕಾಶನದ ಪ್ರಕಟಣೆಗಳಲ್ಲಿ ಯಾವುದೇ ಕಟ್ಟುಕಥೆಗಳಿಲ್ಲ.  ಧರ್ಮಗಳ ಬಗ್ಗೆ ಪರಸ್ಪರ ತಿಳಿದುಕೊಂಡು ಅಪನಂಬಿಕೆಗಳನ್ನು ಹೋಗಲಾಡಿಸಿ ಅಪ್ಪಟ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂಬುದೇ ಶಾಂತಿ ಪ್ರಕಾಶನದ ದ್ಯೇಯೋದ್ಧೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್  ಯುಎಇ ಇದರ ರಾಷ್ಟೀಯ ಅಧ್ಯಕ್ಷರಾದ ಆರಿಫ್ ಶರೀಫ್, ಐಸಿಸಿ ಶಾರ್ಜಾ ಮುಖ್ಯಸ್ಥರಾದ ಅಬ್ದುಲ್ ಖದೀರ್, SQR ಇಲ್ಯಾಸ್, ಅಕ್ತರ್ ಹುಸೈನ್ ಭಟ್ಕಳ್, ನೂರ್ ಅಶ್ಫಕ್ ಕಾರ್ಕಳ, ಶಾಂತಿ ಪ್ರಕಾಶನ ಪುಸ್ತಕ ಮಳಿಗೆಯ ಸಂಚಾಲಕರಾದ ಅಬ್ದುಲ್ ಸಲಾಮ್ ದೇರಳಕಟ್ಟೆ, ವಿಕೆ ರಶೇದ್, ಹಫೀಝ್ ಕುದ್ರೋಳಿ, ಅಶ್ರಫ್ ಹಸನ್ ಉಳ್ಳಾಲ, ಮರ್ಯಮ್ ಶಹೀರ, ಅಶ್ರಫ್ ಮಡಿಕೇರಿ ಮುಂತಾದವರು ಉಪಸ್ಥಿತರಿದ್ದರು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...