ಶಾರ್ಜಾ : ದಕ್ಷಿಣ ಕರ್ಣಾಟಕ ಸುನ್ನಿ ಸೆಂಟರ್ ಅಬುಶಘಾರ ಯುನಿಟ್ ಇದರ ಪ್ರಥಮ ಮಹಾಸಭೆ ಯು ಜನಾಬ್.ಅಬ್ದುಲ್ ರಜಾಕ್ ಹಾಜಿ ರವರ ನಿವಾಸದಲ್ಲಿ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಅಸ್ಮಾಹುಲ್ ಉಸ್ನಾ ದಿಕ್ರ್ ಮಜ್ಲಿಸ್ ನೊಂದಿಗೆ ನಡೆಯಿತು. ರಾಷ್ಟೀಯ ಸಮಿತಿ ವತಿಯಂದ ಉಸ್ತುವಾರಿಯಾಗಿ ಜನಾಬ್.ಎಂ.ಇ.ಮೂಳೂರು , ಜನಾಬ್.ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು ಹಾಗೂ ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್ ಆಗಮಿಸಿ ಸೂಕ್ತ ಸಲಹೆ ಹಾಗೂ ಸಂಘಟನೆ ಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ಯವರು ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ರಾಷ್ಟೀಯ ಸಮಿತಿ ಪ್ರದಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ಹಾಗೂ ಯೂಸುಫ್ ಅರ್ಲಪದವು ರವರು ನೂತನ ಸಮಿತಿಗೆ ಶುಭ ಹಾರೈಕೆ ಮಾತುಗಳನ್ನು ಆಡಿದರು. ಸಭೆಯಲ್ಲಿ ಹಾಜಿ.ಅಬ್ದುಲ್ಲಾ ಬೀಜಾಡಿ, ಅಬ್ಬಾಸ್ ಪಾಣಾಜೆ, ಸಮೀರ್ ಕಾರ್ನಾಡ್ ಉಪಸ್ಥಿತರಿದ್ದು ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ರಜಾಕ್ ಹಾಜಿ ವಹಿಸದರು. ಹುಸೈನ್ ಹೀನೋಳಿ ಸ್ವಾಗತಿಸಿ ವರದಿ ಹಾಗೂ ಲೆಕ್ಕಪತ್ರವನ್ನು ಅಶ್ರಫ್ ಸತ್ತಿಕಲ್ ಮಂಡಿಸಿದರು ಕೊನೆಯಲ್ಲಿ ರಪೀಕ್ ಸತ್ತಿಕಲ್ ಧನ್ಯವಾದ ಸಮರ್ಪಿಸಿದರು.
2017 - 18 ರ ಸಾಲಿನ ನೂತನ ಸಮಿತಿ
ಗೌರವಾಧ್ಯಕ್ಷರು: ಜನಾಬ್.ಇಬ್ರಾಹಿಂ ಮುಸ್ಲಿಯಾರ್ ಆನೆಕಲ್ಲು
ಅಧ್ಯಕ್ಷರು : ಜನಾಬ್.ಅಬ್ದುಲ್ ರಜಾಕ್ ಹಾಜಿ ಜಲ್ಲಿ
ಉಪಾದ್ಯಕ್ಷರು : ಜನಾಬ್.ರವೂಫ್ ಕಣ್ಣಂಗಾರ್ , ಜನಾಬ್.ಅಬ್ದುಲ್ ಖಾದರ್ ದೇಲಂಪಾಡಿ
ಪ್ರಧಾನ ಕಾರ್ಯದರ್ಶಿ : ಜನಾಬ್.ಅಶ್ರಪ್ ಅಲಿ ಸತ್ತಿಕಲ್
ಜೊತೆ ಕಾರ್ಯದರ್ಶಿ : ಜನಾಬ್.ಹುಸೈನ್ ಇನೋಳಿ , ಜನಾಬ್.ರಪೀಕ್ ಸತ್ತಿಕಲ್
ಕೋಶಾಧಿಕಾರಿ : ಜನಾಬ್.ರಿಯಾಜ್ ಕುಳಾಯಿ
ಲೆಕ್ಕ ಪರಿಶೋದಕರು : ಜನಾಬ್.ಸರಾಫತುಲ್ಲಾ
ಸಂಚಾಲಕರು : ಜನಾಬ್.ರಫೀಕ್ ಗಾಂಧಿನಗರ ,ಜನಾಬ್.ನಜೀರ್ ಕುಪ್ಪಟ್ಟಿ, ಜನಾಬ್.ಖಾದರ್ ಸಾಲೆತ್ತೂರು
ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು.