ಮುಂಡಗೋಡ : ಜಿಂಕೆಯನ್ನು ನುಂಗುತ್ತಿದ್ದ ಹೆಬ್ಬಾವನ್ನು ಜಿಂಕೆಯಿಂದ ಬಿಡಿಸಿ ಅದನ್ನು ಗ್ರಾಮಕ್ಕೆ ತಂದು ಕೊಂದು ಹಾಕಿದ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು 7ಮಂದಿಯನ್ನು ಬಂಧಿಸಿ ವನ್ಯಜೀವ ರಕ್ಷಣೆ ಕಾನೂನಡಿ ಕ್ರಮ ಜರಗಿಸಿದ್ದಾರೆ.
ಕಾಡಿನ ಪ್ರದೇಶದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ವಾವು ಒಂದು ವರ್ಷದ ಜಿಂಕೆ ಮರಿಯನ್ನು ನುಂಗುತ್ತಿರುವಾಗ ಜಿಂಕೆಯನ್ನು ಹೆಬ್ಬಾವಿನಿಂದ ಬೇರ್ಪಡಿಸಲು ಮಂಗಗಳಿಂದ ರಕ್ಷಣೆಮಾಡಲು ಹೊಲವನ್ನು ಕಾಯಲು ಹೋಗಿದ್ದ ಪ್ರತ್ಯಕ್ಷ ಕಂಡ ವ್ಯಕ್ತಿ ಊರ ಜನರಿಗೆ ಕರೆದುಕೊಂಡು ಬಂದು ಜಿಂಕೆಯನ್ನು ಬೇರ್ಪಡಿಸಿ ಸತ್ತ ಜಿಂಕೆಯನ್ನು ಹಾಗೂ ಜೀವಂತ ಹೆಬ್ಬಾವನ್ನು ಬಸಾಪುರ ಗ್ರಾಮಕ್ಕೆ ತಂದು ಹೆಬ್ವಾವುವನ್ನು ಕೊಂದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು 7 ಜನರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ ಘಟನೆ ತಾಲೂಕಿನ ನಂದಿಗಟ್ಟಾ ಪಂಚಾಯತ್ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ
ಬಂದಿತ ಆರೋಪಿತರನ್ನು ಬಸವರಾಜ ಕೋಣಿ, ಶೇಕಪ್ಪ ಬೇವಿನಮರದ ಮೋಹನ ಸಿಂಗ್ ರಜಪೂತ್ ಮಹದೇವ ಸುತಗಟ್ಟಿ, ಬಸಪ್ಪಾ ಹುಂಚಣ್ಣನವರ, ಮಧುಸಿಂಗ್ ರಜಪೂತ, ವಿಜಯಸಿಂಗ್ ಕಾರ್ಪೇಂಟರ ಹಾಗೂ ಇನ್ನತರರು ಸೇರಿದ್ದಾರೆ ಎಂದು ಹೇಳಲಾಗಿದೆ.
ಕಾಡಿನ ಪ್ರದೇಶದಲ್ಲಿ ಹೆಬ್ಬಾವು ಜಿಂಕೆಯನ್ನು ನುಂಗುತ್ತಿರುವುದು ಸಹಜ ಪ್ರತಿಕ್ರಿಯೇ ಆದರೆ ಜಿಂಕೆಯನ್ನು ಬೇರ್ಪಡಿಸಿದ್ದು ಮಾನವಿತೇ ಎಂದು ಭಾವಿಸಿದರು ಜೀವಂತ ಹೆಬ್ಬಾವು ವನ್ನು ಕಾಡಿನ ಪ್ರದೇಶದಿಂದ ಸುಮಾರು 1 ಕಿಮಿ ದೂರದ ಬಸಾಪುರ ಗ್ರಾಮಕ್ಕೆ ತಂದು ಕೊಂದು ಹಾಕಿದ್ದು ವನ್ಯ ಜೀವರಕ್ಷಣೆ ಕಾನೂನ ಅಡಿಯಲ್ಲಿ ಆರೋಪಿಗಳಾಗುತ್ತಾರೆ ಎಂದು ಹೇಳಲಾಗುತ್ತಿದೆ
ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ಉಪವಲಯ ಅರಣ್ಯಾಧಿಕಾರಿಗಳ ಸಹಾಯದಿಂದ ಆರೋಪಿತರನ್ನು ತಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.